Select Your Language

Notifications

webdunia
webdunia
webdunia
webdunia

ಅಂಬರೀಷ್ ಮನ ಒಲಿಕೆಗೆ ಮುಂದುವರಿದ ಕಸರತ್ತು

ಅಂಬರೀಷ್ ಮನ ಒಲಿಕೆಗೆ ಮುಂದುವರಿದ ಕಸರತ್ತು
ಬೆಂಗಳೂರು , ಸೋಮವಾರ, 23 ಏಪ್ರಿಲ್ 2018 (18:42 IST)
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಮೀನ ಮೇಷ ಎಣಿಸುತ್ತಿರುವ ಅಂಬರೀಷ್
ಮನ ಒಲಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ.


ಮಂಡ್ಯ ಪ್ರಚಾರ ಸಮಿತಿ ಅಧ್ಯಕ್ಷ ಚಿದಂಬರಂ ಇಂದು ರೆಬಲ್ ಸ್ಟಾರ್ ಅಂಬರೀಷ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅಂಬರೀಷ್ ಚುನಾವಣಾ ವೆಚ್ಚ ಪಕ್ಷವೇ ಭರಿಸುವುದಾಗಿ ಹೇಳುವಂತೆ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದರು.

ಅದರಂತೆ ಇಂದು ಅಂಬಿ ಭೇಟಿಯಾಗಿ ಚರ್ಚೆ ನಡೆಸಿರುವ ಚಿದಂಬರಂ ಚುನಾವಣೆಯ ಸಂಪೂರ್ಣ ಜವಾಬ್ದಾರಿ ವಹಿಸುವುದಾಗಿ ಭರವಸೆ ನೀಡಿದ್ದಲ್ಲದೆ, ಯಾವುದೇ ಸಮಸ್ಯೆಗಳ ಬಗ್ಗೆ ಚಿಂತೆ ಮಾಡದೇ ಚುನಾವಣೆ ಕಣಕ್ಕಿಳಿಯಲು ಒತ್ತಾಯ ಹೇರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನಗರ, ಕನಕಪುರದಲ್ಲಿ ಮಹಿಳೆಯರಿಗೆ ಮಣೆ ಹಾಕಿದ ಬಿಜೆಪಿ