Select Your Language

Notifications

webdunia
webdunia
webdunia
webdunia

ಮರುಮತದಾನ ನಡೆಯುವಲ್ಲಿ ಹಣ ಹಂಚಿ ಸಿಕ್ಕಿಬಿದ್ದರೇ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್?

ಮರುಮತದಾನ ನಡೆಯುವಲ್ಲಿ ಹಣ ಹಂಚಿ ಸಿಕ್ಕಿಬಿದ್ದರೇ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್?
ಬೆಂಗಳೂರು , ಸೋಮವಾರ, 14 ಮೇ 2018 (13:09 IST)
ಬೆಂಗಳೂರು: ಇಂದು ಮರು ಮತದಾನ ನಡೆಯುತ್ತಿರುವ ಲೊಟ್ಟೆಗೊಲ್ಲಪ್ಪಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಹಣ ಹಂಚುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ರದ್ದಾಂತ ಎಬ್ಬಿಸಿದ್ದಾರೆ.

ಅನ್ರಿಯಾ ಪಲೇಷಿಯಸ್ ಎಂಬ ಅಪಾರ್ಟ್ ಮೆಂಟ್ ಒಳಗಿದ್ದ ಬೈರತಿ ಸುರೇಶ್ ಹಣ ಹಂಚುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ಅಲ್ಲದೆ, ಅಪಾರ್ಟ್ ಮೆಂಟ್ ಹೊರಗೆ ಭಾರೀ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಬೈರತಿ ಸುರೇಶ್ ತಿಂಡಿ ತಿನ್ನುತ್ತಿದ್ದರು ಎನ್ನಲಾಗಿದೆ. ಪ್ರತಿಭಟನೆ ಬಳಿಕ ಅಪಾರ್ಟ್ ಮೆಂಟ್ ಹೊರಗೆ ಬಂದ ಬೈರತಿ ಸುರೇಶ್ ವಿರುದ್ಧ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ನಟಿ ಹೇಮಾ ಮಾಲಿನಿ