Webdunia - Bharat's app for daily news and videos

Install App

ಕರ್ನಾಟಕ ಸಿಎಂ ಬದಲಾವಣೆಗೆ ಹೊರಟ ಕಾಂಗ್ರೆಸ್ ಹೈಕಮಾಂಡ್ ಗೆ ಎದುರಾಗಿದೆ ದೊಡ್ಡ ಶಾಕ್

ಕೃಷ್ಣವೇಣಿ ಕೆ
ಶನಿವಾರ, 30 ಮೇ 2026 (11:00 IST)
ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಗೆ ಹೊರಟ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ದೊಡ್ಡ ತಲೆನೋವೊಂದು ಎದುರಾಗಿದೆ. ಸಿಎಂ ಬದಲಾವಣೆಯೇನೋ ಸುಲಭವಾಗಿ ನಡೆದಿದೆ. ಆದರೆ ಡಿಸಿಎಂ ವಿಚಾರವೇ ಕಗ್ಗಂಟಾಗಿದೆ.

ಸಿದ್ದರಾಮಯ್ಯರಿಂದ ರಾಜೀನಾಮೆ ಕೊಡಿಸುವುದು ಹೈಕಮಾಂಡ್ ಗೆ ಸುಲಭವಾಗಿ ನಡೆದು ಹೋಯಿತು. ಇದಾದ ಬಳಿಕ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಇದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರಿಂದ ಒಂದೊಂದೇ ಬೇಡಿಕೆ ಶುರುವಾಗಿದೆ.

ವಿಶೇಷವಾಗಿ ಸಿದ್ದರಾಮಯ್ಯ ಬಣವನ್ನೂ ಸಮಾಧಾನಪಡಿಸಲು ಮತ್ತು ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ಒಗ್ಗಟ್ಟು ಕಾಯ್ದುಕೊಳ್ಳಲು ಬರೋಬ್ಬರಿ ನಾಲ್ವರು ಡಿಸಿಎಂ ಹುದ್ದೆ ಸೃಷ್ಟಿಸಲು ಮುಂದಾಗಿದೆ. ಆದರೆ ನಾಲ್ವರು ಡಿಸಿಎಂಗಳು ಯಾರು ಎಂದು ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿದೆ.

ಡಿಸಿಎಂ ಹುದ್ದೆಗೆ ಈಗ ಹಿರಿಯ ಮತ್ತು ಪ್ರಭಾವಿ ನಾಯಕರು ಬೇಡಿಕೆಯಿಡುತ್ತಿದ್ದಾರೆ. ಡಿಸಿಎಂ ಹುದ್ದೆ ರೇಸ್ ನಲ್ಲಿ ಪರಿಶಿಷ್ಟ ಜಾತಿ, ದಲಿತ, ಅಲ್ಪಸಂಖ್ಯಾತ ಸಮುದಾಯ, ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ಡಿಸಿಎಂ ಹುದ್ದೆ ರೇಸ್ ನಲ್ಲಿ ಡಾ ಜಿ ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಯುಟಿ ಖಾದರ್, ಪ್ರಿಯಾಂಕ್ ಖರ್ಗೆ, ಡಾ ಯತೀಂದ್ರ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹೆಸರುಗಳು ಕೇಳಿಬರುತ್ತಿವೆ. ಒಂದು ಕೋಟಾದಡಿ ಕನಿಷ್ಠ ಇಬ್ಬರ ನಡುವೆ ಪೈಪೋಟಿಯಿದೆ. ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನೊಬ್ಬರ ಅಸಮಾಧಾನ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಯಾರನ್ನು ಆಯ್ಕೆ ಮಾಡುವುದು ಬಿಡುವುದು ಎಂಬ ದೊಡ್ಡ ತಲೆನೋವು ಹೈಕಮಾಂಡ್ ಮುಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಾಲಕನಾಗಿ ಕೊನೆಯ ದಿನ.. ಬಸ್ ಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿದ ಕೇರಳ ಸಾರಿಗೆ ಚಾಲಕ: ಭಾವುಕ ವಿಡಿಯೋ

ಗ್ಯಾರಂಟಿಗಳ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರ; ಕಡುಬಡವರ ಬದುಕು ಮರೆತಿದೆ : ಬಿ.ವೈ. ವಿಜಯೇಂದ್ರ

ಶ್ರೀಕೃಷ್ಣ ಜನಿಸಿದ ಜೈಲು ಈಗಲೂ ಇದೆಯೇ, ಅಷ್ಠಮಿ ದಿನ ಪವಿತ್ರ ಸ್ಥಳ ಕಣ್ತುಂಬಿಕೊಳ್ಳಿ: ಇಲ್ಲಿದೆ ನೋಡಿ Video

ಛೇ.. ಎಂಥಾ ಮಗಳು ಇವಳು.. ಆಸ್ತಿ ಆಸೆಗೆ ಆಸ್ಪತ್ರೆಯಲ್ಲಿರುವ ತಂದೆ ಕೈಯಲ್ಲೇ ಇಂಥಾ ಕೆಲಸ ಮಾಡಿಸೋದಾ Video

ಕೆಆರ್ ಮಾರುಕಟ್ಟೆಗೆ ಸರಕು ವಾಹನ ಎಂಟ್ರಿಗೂ ಇನ್ನು ಶುಲ್ಕ: ಜನರ ಮೇಲೆ ಮತ್ತೊಂದು ಬರೆ

ಮುಂದಿನ ಸುದ್ದಿ
Show comments