Publish Date: Sat, 23 Apr 2022 (20:17 IST)
Updated Date: Sat, 23 Apr 2022 (20:18 IST)
ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲ ಆದಾಗ ರಾಮನಗರ, ಚನ್ನಪಟ್ಟಣದಲ್ಲಿ ಕೋಮು ಗಲಭೆ ಹಬ್ಬಿಸ್ತಿದ್ರು. ಇದು ಕಾಂಗ್ರೆಸ್ ಪರಿಪಾಟ. ಪಾರ್ಟಿ ಉದ್ಧಾರಕ್ಕಾಗಿ ಗಲಭೆ ಸೃಷ್ಟಿ ಮಾಡ್ತಿದ್ರು. ಕೆ.ಜಿ ಹಳ್ಳಿ,ಡಿ.ಜೆ ಹಳ್ಳಿ ಗಲಭೆ ನಡೆಸಿದ್ದು ಕಾಂಗ್ರೆಸ್. ಏಟು ತಿಂದಿದ್ದು ಕಾಂಗ್ರೆಸ್ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಹುಬ್ಬಳ್ಳಿ ಗಲಭೆ ನಡೆದಾಗ, ಅಮಾಯಕರನ್ನ ಬಂಧಿಸಿದ್ದಾರೆ ಅಂತ ಹೇಳಿದ್ರು, ಈಗ ಮೌನವಾಗಿದ್ದಾರೆ. ಈಗ ನೋಡಿದ್ರೆ ಕಾಂಗ್ರೆಸ್ ಅಧ್ಯಕ್ಷ, ಮೌಲ್ವಿ ಬಂಧನವಾಗಿದೆ. ಎಲ್ಲಾ ಘಟನೆ ಹಿಂದೆ ಕಾಂಗ್ರೆಸ್ ಭಾಗಿಯಾಗಿರೋದು ಕಂಡು ಬರ್ತಿದೆ. ಈ ಕೃತ್ಯ ಮಾಡ್ತಿರೋದನ್ನ ಯಾರು ಮಾಡಿಸ್ತಿದ್ದಾರೆ ಎಂಬುದನ್ನ ಸರ್ಕಾರ ತನಿಖೆ ಮಾಡಬೇಕು. ಹಿಜಾಬ್ ವಿಚಾರದಲ್ಲೂ ಕೂಡ ಹೀಗೆ ಆಗಿದೆ ಎಂದರು.