Publish Date: Tue, 23 Jan 2024 (21:04 IST)
Updated Date: Tue, 23 Jan 2024 (19:31 IST)
ತೆಲಂಗಾಣ : ರೇವಂತ್ ರೆಡ್ಡಿನೇತೃತ್ವದ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ತೆಲಂಗಾಣದಲ್ಲಿ 500 ರೂ. ಗಳಿಗೆ ಅಡುಗೆ ಅನಿಲ ಪೂರೈಸುವುದಾಗಿ ಹೇಳಿದೆ.ಕರ್ನಾಟಕ ಮಾದರಿಯಲ್ಲೇ ಗ್ಯಾರೆಂಟಿ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಸರ್ಕಾರ 500 ರೂ. ಗಳಿಗೆ ಅಡುಗೆ ಅನಿಲ ಮಾತ್ರವಲ್ಲದೇ, ಪ್ರತಿ ತಿಂಗಳೂ 2500 ರೂ. ಹಣವನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿತ್ತು.
ಇತ್ತೀಚಿಗಷ್ಟೇ ಕಾಂಗ್ರೆಸ್ ತೆಲಂಗಾಣದಲ್ಲಿ ನಡೆಸಿದ ಪ್ರಜಾ ಪಾಲನ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 91 ಲಕ್ಷ ಮಂದಿ ಮಹಾಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.