Webdunia - Bharat's app for daily news and videos

Install App

ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್ನ ಕನಸು-ಮನಸಿನಲ್ಲೂ ಸಾಧ್ಯವಿಲ್ಲ: ಡಾ.ಅಶ್ವತ್ಥ ನಾರಾಯಣ

Webdunia
ಭಾನುವಾರ, 26 ಸೆಪ್ಟಂಬರ್ 2021 (08:40 IST)
ಉಡುಪಿ, ಸೆ.26 : ರಾಷ್ಟ್ರೀಯ ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್ ಪಕ್ಷದವರ ಕನಸು-ಮನಸಿನಲ್ಲೂ ಸಾಧ್ಯವಿಲ್ಲ. ಇದು ಜನರಿಗೋಸ್ಕರ ಮಾಡಿರುವ ಶಿಕ್ಷಣ ನೀತಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನೀತಿಯಲ್ಲಿ ಏನು ನ್ಯೂನ್ಯತೆ ಇದೆ ಹೇಳಲಿ. ಶಿಕ್ಷಣತಜ್ಞ, ಶಿಕ್ಷಣ ಸಂಸ್ಥೆಯ ಮಾಲಕರು ಅಂತ ಹೇಳುತ್ತಾರೆ. ಎಲ್ಲಾ ಬರೀ ಬುರುಡೆ. ಒಳ್ಳೇದು ಮಾಡೋಕು ಗೊತ್ತಿಲ್ಲ ಮಾಡೋದಕ್ಕೂ ಬಿಡಲ್ಲ. ಬಿಜೆಪಿ ಹತ್ತಿರ ಇದೆಲ್ಲ ನಡೆಯುವುದಿಲ್ಲ. ಜನ ನಮಗೆ ಕೆಲಸ ಮಾಡುವ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದರು.
ಭಾರತ್ ಬಂದ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಜಾಬಿ ಗರು ನಡೆಸುತ್ತಿರುವ ಹೋರಾಟದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜನಪರವಾದ ಕಾಳಜಿ ಇಲ್ಲದ ವ್ಯಾಪಾರಿಗಳು ಹೋರಾಟ ಮಾಡುತ್ತಿದ್ದಾರೆ. ಕೃಷಿ ಬಿಲ್ ಸರಕಾರ ಮಾಡಿರುವ ದೊಡ್ಡ ಸುಧಾರಣೆ. ರೈತರು ವ್ಯಾಪಾರಿಗಳ ಕೈಯಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದರು. ಇದರಿಂದ ರೈತರಿಗೆ ಸ್ವಾತಂತ್ರ ಸಿಕ್ಕಂತಾಗಿದೆ. ರೈತರಿಗೆ ಉತ್ತಮವಾದ ಮಾರುಕಟ್ಟೆ ಸಿಗಲಿದೆ ಎಂದು ಹೇಳಿದರು.
ರೈತರು ಸರಕಾರದ ಸಬ್ಸಿಡಿ- ಸಹಾಯ ಬೇಡ, ಬೆಳೆಗೆ ಬೆಲೆ ಕೊಡಿ ಎಂದು ಹೇಳುತ್ತಾರೆ. ಕಾಂಗ್ರೆಸ್ 73 ವರ್ಷಗಳ ಹಳೆಯ ಸುಧಾರಣೆಗಳನ್ನು ಜನ ನೋಡಿ ದ್ದಾರೆ. ರೈತರ ಸುಧಾರಣೆ ಮಾಡದಿದ್ದರೆ ನಮಗೆ ಮತ ಬೀಳುತ್ತಾ? ರೈತರಿಗೆ ವಿರುದ್ಧವಾಗಿದ್ದರೆ ಚುನಾವಣೆಗೆ ಹೋಗಲು ಆಗುತ್ತಾ? ಯಾವುದೇ ಪ್ರತಿಭಟನೆ ನಡೆದರೆ ಅದು ರೈತ ವಿರೋಧಿಯಾಗುತ್ತದೆ. ಪ್ರತಿಭಟನೆ ಮಾಡುವವರು ರೈತ ವಿರೋಧಿಗಳು ಎಂದು ಅವರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments