Webdunia - Bharat's app for daily news and videos

Install App

ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್ನ ಕನಸು-ಮನಸಿನಲ್ಲೂ ಸಾಧ್ಯವಿಲ್ಲ: ಡಾ.ಅಶ್ವತ್ಥ ನಾರಾಯಣ

Webdunia
ಭಾನುವಾರ, 26 ಸೆಪ್ಟಂಬರ್ 2021 (08:40 IST)
ಉಡುಪಿ, ಸೆ.26 : ರಾಷ್ಟ್ರೀಯ ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್ ಪಕ್ಷದವರ ಕನಸು-ಮನಸಿನಲ್ಲೂ ಸಾಧ್ಯವಿಲ್ಲ. ಇದು ಜನರಿಗೋಸ್ಕರ ಮಾಡಿರುವ ಶಿಕ್ಷಣ ನೀತಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನೀತಿಯಲ್ಲಿ ಏನು ನ್ಯೂನ್ಯತೆ ಇದೆ ಹೇಳಲಿ. ಶಿಕ್ಷಣತಜ್ಞ, ಶಿಕ್ಷಣ ಸಂಸ್ಥೆಯ ಮಾಲಕರು ಅಂತ ಹೇಳುತ್ತಾರೆ. ಎಲ್ಲಾ ಬರೀ ಬುರುಡೆ. ಒಳ್ಳೇದು ಮಾಡೋಕು ಗೊತ್ತಿಲ್ಲ ಮಾಡೋದಕ್ಕೂ ಬಿಡಲ್ಲ. ಬಿಜೆಪಿ ಹತ್ತಿರ ಇದೆಲ್ಲ ನಡೆಯುವುದಿಲ್ಲ. ಜನ ನಮಗೆ ಕೆಲಸ ಮಾಡುವ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದರು.
ಭಾರತ್ ಬಂದ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಜಾಬಿ ಗರು ನಡೆಸುತ್ತಿರುವ ಹೋರಾಟದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜನಪರವಾದ ಕಾಳಜಿ ಇಲ್ಲದ ವ್ಯಾಪಾರಿಗಳು ಹೋರಾಟ ಮಾಡುತ್ತಿದ್ದಾರೆ. ಕೃಷಿ ಬಿಲ್ ಸರಕಾರ ಮಾಡಿರುವ ದೊಡ್ಡ ಸುಧಾರಣೆ. ರೈತರು ವ್ಯಾಪಾರಿಗಳ ಕೈಯಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದರು. ಇದರಿಂದ ರೈತರಿಗೆ ಸ್ವಾತಂತ್ರ ಸಿಕ್ಕಂತಾಗಿದೆ. ರೈತರಿಗೆ ಉತ್ತಮವಾದ ಮಾರುಕಟ್ಟೆ ಸಿಗಲಿದೆ ಎಂದು ಹೇಳಿದರು.
ರೈತರು ಸರಕಾರದ ಸಬ್ಸಿಡಿ- ಸಹಾಯ ಬೇಡ, ಬೆಳೆಗೆ ಬೆಲೆ ಕೊಡಿ ಎಂದು ಹೇಳುತ್ತಾರೆ. ಕಾಂಗ್ರೆಸ್ 73 ವರ್ಷಗಳ ಹಳೆಯ ಸುಧಾರಣೆಗಳನ್ನು ಜನ ನೋಡಿ ದ್ದಾರೆ. ರೈತರ ಸುಧಾರಣೆ ಮಾಡದಿದ್ದರೆ ನಮಗೆ ಮತ ಬೀಳುತ್ತಾ? ರೈತರಿಗೆ ವಿರುದ್ಧವಾಗಿದ್ದರೆ ಚುನಾವಣೆಗೆ ಹೋಗಲು ಆಗುತ್ತಾ? ಯಾವುದೇ ಪ್ರತಿಭಟನೆ ನಡೆದರೆ ಅದು ರೈತ ವಿರೋಧಿಯಾಗುತ್ತದೆ. ಪ್ರತಿಭಟನೆ ಮಾಡುವವರು ರೈತ ವಿರೋಧಿಗಳು ಎಂದು ಅವರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಪ್ರತಿ ವರ್ಷವೂ ಯೋಗ ದಿನ ಅಂದುಕೊಂಡದಕ್ಕಿಂತ ವಿಶೇಷವಾಗಿರುತ್ತದೆ: ಪ್ರಧಾನಿ ಮೋದಿ ಮೆಚ್ಚುಗೆ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಮುಂದಿನ ಸುದ್ದಿ
Show comments