Select Your Language

Notifications

webdunia
webdunia
webdunia
webdunia

ಮೋದಿ ಪ್ರಮಾಣ ವಚನಕ್ಕೆ ಶುಭಾಶಯ : ಕಡಲತಡಿಯಲ್ಲಿ ಬೃಹತ್ ಮರಳು ಶಿಲ್ಪ

ಮೋದಿ ಪ್ರಮಾಣ ವಚನಕ್ಕೆ ಶುಭಾಶಯ : ಕಡಲತಡಿಯಲ್ಲಿ ಬೃಹತ್ ಮರಳು ಶಿಲ್ಪ
ಉಡುಪಿ , ಗುರುವಾರ, 30 ಮೇ 2019 (17:30 IST)
ದೇಶದಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.

ಮೋದಿ ಸಂಪುಟ ಮತ್ತು ಪ್ರಮಾಣ ವಚನ‌ಸಮಾರಂಭ ಕೆಂಪು ಕೋಟೆಯಲ್ಲಿ ನೆರವೇರಲಿದ್ದು ದೇಶದಾದ್ಯಂತ ಗಣ್ಯರ ಶುಭ ಹಾರೈಕೆಗಳು ಹರಿದು ಬರುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ  ಕಲಾವಿದ ಹರೀಶ್ ಸಾಗಾ, ಮೋದಿ ಪ್ರಮಾಣ ವಚನ ಮತ್ತು ಸಂಪುಟ ರಚನೆಗೆ ಮರಳು ಶಿಲ್ಪದ ರಚನೆ ಮೂಲಕ ಶುಭ ಹಾರೈಸಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು, ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ‌ ಕ್ಲಿಕ್ಕಿಸಿಕೊಂಡರು.




Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಜಗನ್‌ ಮೋಹನ್‌ ರೆಡ್ಡಿ ಇಂದು ಪ್ರಮಾಣ ವಚನ ಸ್ವೀಕಾರ