Publish Date: Wed, 28 Dec 2022 (13:50 IST)
Updated Date: Wed, 28 Dec 2022 (13:52 IST)
ಬಿಬಿಎಂಪಿ ಹೊರ ವಲಯದಲ್ಲಿ 2016 - 19 ರವರೆಗೆ ಹಾಕಲಾದ RO ಪ್ಲ್ಯಾಂಟ್ ಬಗ್ಗೆ ಇಡಿ ಮಾಹಿತಿ ಕೇಳಿದ್ದು.ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.ಇದು ಮೊದಲು ಎಸಿಬಿನಲ್ಲಿ ದೂರು ದಾಖಲಾಗಿದೆ, ಆ ಬಳಿಕ ಇಡಿಗೆ ವರ್ಗವಾಗಿದೆ.ನವೆಂಬರ್ ತಿಂಗಳಲ್ಲಿ ನಮಗೆ ನೋಟೀಸ್ ಬಂದಿತ್ತು.ಈ ವಿಚಾರವಾಗಿ ನಾನು ಇಂಜಿನಿಯರ್ ಚೀಫ್ ಪ್ರಹ್ಲಾದ್ ಅವರಿಗೆ ನೋಡೆಲ್ ಅಧಿಕಾರಿಯಾಗಿ ಮಾಡಿದ್ದೇನೆ.RO ಪ್ಲ್ಯಾಂಟ್ ಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ನಾವು ಇಡಿಗೆ ಕೊಡ್ತಿದ್ದೇವೆ.ಮುಖ್ಯವಾಗಿ ಪಾಲಿಕೆ ವ್ಯಾಪ್ತಿಯ ಐದು ವಲಯಗಳಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಲಾಗ್ತಿದೆ.ಈಗ ಇಡಿಯಿಂದ ತನಿಖೆಯಿಂದ ನಡೀತಿದೆ, ಅವರು ಕೇಳುವ ಎಲ್ಲಾ ಮಾಹಿತಿ ನಾವು ಕೊಡ್ತೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.