Select Your Language

Notifications

webdunia
webdunia
webdunia
webdunia

ಅಶ್ವಥ್ ಹಾಗೂ ಕಟೀಲ್ ವಿರುದ್ಧ ದೂರು

ಅಶ್ವಥ್ ಹಾಗೂ ಕಟೀಲ್ ವಿರುದ್ಧ ದೂರು
ಸಿದ್ದರಾಮಯ್ಯ ಅವರನ್ನ‌ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಸಂಬಂಧಿಸಿದಂತೆ, ಅಶ್ವಥ್ ನಾರಾಯಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ವಿರುದ್ಧ ದೂರು ದಾಖಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ S.ಮನೋಹರ್​ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟಿಪ್ಪು ವಂಶಸ್ಥರನ್ನ ಕೊಲೆ ಮಾಡಬೇಕು ಎಂದು ನಳಿನ್‌ಕುಮಾರ್‌ ಕಟೀಲ್ ಹೇಳಿಕೆ ನೀಡುತ್ತಾರೆ, ಸಿದ್ದರಾಮಯ್ಯರನ್ನ ಟಿಪ್ಪು ಹೊಡೆದು ಹಾಕ್ದಂಗೆ ಹೊಡೆದು ಹಾಕ್ಬೇಕು ಅಂತಾ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಟಿಪ್ಪು ವಂಶಸ್ಥರನ್ನ ಕೊಲೆ‌ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ. ಹೀಗಾಗಿ ಅಶ್ವಥ್ ನಾರಾಯಣ್ ಹಾಗೂ ನಳಿನ್‌ ಕುಮಾರ್ ಕಟೀಲ್‌ ವಿರುದ್ದ ಕೊಲೆಯತ್ನದ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ದೂರಿನಲ್ಲಿ ದಾಖಲು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ , ಡಿಕೆಶಿ ಸುರ್ಜೆವಾಲಾಗೆ ಸವಾಲ್ ಹಾಕಿದ ರೇಣುಕಾಚಾರ್ಯ