Webdunia - Bharat's app for daily news and videos

Install App

ಬಿಜೆಪಿ ನಾಯಕರ ಭೂ ಪುರಾಣಗಳ ದೂರು ನೀಡಿದ್ರೆ ರಾಜ್ಯಪಾಲರ ಕಪಾಟು ಸಾಕಾಗಲ್ಲ

Sampriya
ಗುರುವಾರ, 5 ಸೆಪ್ಟಂಬರ್ 2024 (18:43 IST)
ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮದ ಪ್ರಕಾರವೇ ಸಿಎ ನಿವೇಶನ ನೀಡಿದ್ದರ ಬಗ್ಗೆ ಹೊಟ್ಟೆಯಲ್ಲಿ ಹುಳು ಹೊಕ್ಕಂತೆ ಆಡುತ್ತಿರುವ ಬಿಜೆಪಿ ನಾಯಕರ ಭೂ ಪುರಾಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ ಎಂದು ಕಾಂಗ್ರೆಸ್ ಪೋಸ್ಟ್ ಹಂಚಿ ವ್ಯಂಗ್ಯ ಮಾಡಿದೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ಮುಡಾ, ವಾಲ್ಮೀಕಿ ಹಗರಣ ಸಂಚಲನ ಮೂಡಿಸಿದೆ. ಈ ಸಂಬಂಧ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದರೆ. ಇದಕ್ಕೆ ಕೌಂಟರ್ ಕೊಡುತ್ತಿರುವ ಕಾಂಗ್ರೆಸ್, ಒಂದು ವೇಳೆ ಬಿಜೆಪಿ ನಾಯಕರ ಭೂ ಪುರಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ ಎಂದಿದೆ.

ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮದ ಪ್ರಕಾರವೇ ಸಿಎ ನಿವೇಶನ ನೀಡಿದ್ದರ ಬಗ್ಗೆ ಹೊಟ್ಟೆಯಲ್ಲಿ ಹುಳು ಹೊಕ್ಕಂತೆ ಆಡುತ್ತಿರುವ ಬಿಜೆಪಿ
 ನಾಯಕರ ಭೂ ಪುರಾಣಗಳ ದೂರು ನೀಡಿದರೆ ಕಡತಗಳನ್ನಿಡಲು ರಾಜ್ಯಪಾಲರ ಕಚೇರಿಯ ಕಾಪಾಟುಗಳು ಸಾಲುವುದಿಲ್ಲ!

ಚಲವಾದಿ ನಾರಾಯಣಸ್ವಾಮಿಯವರ ದಮ್ ಬಿರಿಯಾನಿ ಹೋಟೆಲ್ ಕತೆ ಈಗಾಗಲೇ ಬಹಿರಂಗವಾಗಿದೆ.

ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ ದೇವನಹಳ್ಳಿಯಲ್ಲಿ ಎಕರೆಗಟ್ಟಲೆ KIADB ನಿವೇಶನವನ್ನು ಪಡೆದುಕೊಂಡಿದ್ದು ತಮ್ಮ ಪ್ರಭಾವ ಬಳಸಿ ಅಲ್ಲವೇ?
SC/ST ಕೋಟಾದ ನಿವೇಶನ ಶಿವನಗೌಡ ನಾಯಕ್ ಅವರಿಗೆ ಕೊಟ್ಟಿದ್ದು ಬಿಜೆಪಿ ಸರ್ಕಾರವಲ್ಲವೇ?

ಇನ್ನು ವಿಜಯೇಂದ್ರರವರ ಭೂ ಪುರಾಣ ಹೇಳಿ ತೀರದಷ್ಟಿದೆ! ಪ್ರೇರಣಾ ಟ್ರಸ್ಟ್ ಭೂಮಿ ನುಂಗಿದ್ದು ಅಧಿಕಾರ ದುರ್ಬಳಕೆ ಅಲ್ಲವೇ?

ಅಶೋಕ್ ಅವರು ಎಲ್ಲೆಲ್ಲಿ,  ಹೇಗೆ ಹೇಗೆ, ಎಷ್ಟೆಷ್ಟು ಭೂಮಿ ಪಡೆದಿದ್ದಾರೆ ಎನ್ನುವುದನ್ನು ತಿಳಿಸಬೇಕೆ?

ಬಿಜೆಪಿ ಬಯಸಿದರೆ ಎಲ್ಲವನ್ನೂ ಜನರೆದುರು ಚರ್ಚಿಸಲು ನಾವು ಸಿದ್ದರಿದ್ದೇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments