Webdunia - Bharat's app for daily news and videos

Install App

ಕ್ಯಾಪ್ಟರ್ ನಿಂದ ಬಂದು ಮೀನು ಖರೀದಿಸಿದ್ರು !

Webdunia
ಬುಧವಾರ, 31 ಅಕ್ಟೋಬರ್ 2018 (14:15 IST)
ಅರೇ ಇದೇನಪ್ಪ ಒಂದು 500 ರಿಂದ  1000 ರೂಪಾಯಿ ಮೌಲ್ಯದ ಮೀನಿಗಾಗಿ ಹೆಲಿಕಾಪ್ಟರ್ ನಲ್ಲಿ ಬಂದು ಲಕ್ಷಗಟ್ಟಲೇ ಖರ್ಚು ಮಾಡಿ ಕೊಂಡುಕೊಳ್ತಾರಾ ಅಂತ ಹೌಹಾರಬೇಡಿ. ಇದು ನಮ್ಮ ಭಾರತೀಯ ನೌಕದಳದವ ದರ್ಬಾರ್.  

ಮಲ್ಪೆ ಭಾಗದಿಂದ ಗೋವಾ ಗಡಿಯಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿರುವಾಗ ಏಕಾ ಏಕಿ ಬೋಟ್ ಬಳಿ ಹೆಲಿಕಾಪ್ಟರ್ ತಂದ ನೌಕಾ ಸಿಬ್ಬಂದಿಯು ಮೀನು ಕೊಡುವಂತೆ ಸನ್ನೆ ಮಾಡಿದ್ದಾರೆ. ಬೋಟ್ ನಲ್ಲಿದ್ದ ಮೀನುಗಾರರಿಗೆ ಹೇಳಿದ್ದಾರೆ. ಈ ಘಟನೆ  ನಡರದಿರುವುದು ಕಾರವಾರ ಮತ್ತು ಗೋವಾ ಗಡಿ ಭಾಗದ ಅರಬ್ಬಿ ಸಮುದ್ರದಲ್ಲಿ. ಮೀನಿನ ರುಚಿ ಹತ್ತಿದವರಿಗೆ ಮೀನು ತಿನ್ನಲು ಎಂತೆಂತವರು ಏನೇನು ಮಾಡುತ್ತಾರೆ ಮೀನಿಗಾಗಿ ಅಂದ್ರೆ ನಿಜವಾಗಿ ಶಾಕ್ ಆಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋವಾ ಗಡಿಯಲ್ಲಿ ಮಲ್ಪೆಯ ಬೋಟ್ ಒಂದು ಮೀನು ಬೇಟೆ ಮಾಡಿ ಕಾರವಾರದ ಕಡೆ ಹೊಗುತ್ತಿರುವಾಗ ಭಾರತೀಯ ನೌಕಾದಳದ ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕ ಬೋಟ್ ಬಳಿ ಬಂದು ಮೀನುನ್ನು ಪುಕ್ಕಟೆ ಪಡೆದು ಹೋಗಿದ್ದಾರೆ. ಹೀಗೆ ಬೋಟ್ ಬಳಿ ಬಂದು ಮೀನಿಗಾಗಿ ಬೋಟ್ ನವರಿಗೆ ಸನ್ನೆ ಮಾಡಿ ಮೀನುಕೊಡುವಂತೆ ಬೋಟ್ ಗೆ ಹಗ್ಗದ ಮೂಲಕ ಕವರ್ ನೀಡಿ ಮೀನು ಪಡೆಯುತ್ತಿರುವ ದೃಶ್ಯವನ್ನು ಆ ಬೋಟ್ ನೊಂದಿಗಿದ್ದ ಮತ್ತೊಂದು ಬೋಟ್ ನವರು ರೆಕಾರ್ಡ್ ಮಾಡಿದ್ದಾರೆ.

ಈಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ   ಸಾಕಷ್ಟು ವೈರಲ್ ಆಗುತ್ತಿದ್ದು,  ಗಡಿ ಕಾಯುವ ನೌಕಾದಳ ಸಿಬ್ಬಂದಿಗಳ  ಈ ವರ್ತನೆಗೆ ಟೀಕೆ ಸಹ ವ್ಯಕ್ತವಾಗಿದೆ.  ನಂತರ ಹೆಲಿಕಾಪ್ಟರ್ ನಿಂದ ಬೋಟ್ ಗೆ ಹಗ್ಗದ ಮೂಲಕ ಕವರ್ ನನ್ನು ಇಳಿ ಬಿಟ್ಟು ಮೀನು ತೆಗೆದುಕೊಂಡು ಮರಳಿದ್ದಾರೆ. 

ಹೀಗೆ ಹೆಲಿಕಾಪ್ಟರ್ ಮೂಲಕ ಮೀನನ್ನು ಪಡೆಯುತ್ತಿರುವ ದೃಶ್ಯ ವನ್ನು ಪಕ್ಕದಲ್ಲೇ ಇದ್ದ ಇನ್ನೊಂದು ಬೋಟ್ ನವರು ರೆಕಾರ್ಡ್ ಮಾಡಿದ್ದಾರೆ. ಈಗ ಈ ವೀಡಿಯೋ ಸಕತ್ ವೈರಲ್ ಆಗುತ್ತಿದ್ದು, ದೇಶದ ಭದ್ರತೆಗೆ ಬಳಸಬೇಕಾದ ಹೆಲಿಕಾಪ್ಟರ್ ನನ್ನು ಹೀಗೆ ತಮ್ಮ ಸ್ವಂತಕ್ಕೆ ಬಳಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments