Select Your Language

Notifications

webdunia
webdunia
webdunia
webdunia

ಕರಾವಳಿ ಬಿಜೆಪಿಯ 10 ಶಾಸಕರಿಗೆ ಕೊಕ್?

ಕರಾವಳಿ ಬಿಜೆಪಿಯ 10 ಶಾಸಕರಿಗೆ ಕೊಕ್?
bangalore , ಸೋಮವಾರ, 10 ಏಪ್ರಿಲ್ 2023 (15:15 IST)
ಬಿಜೆಪಿ ಟಿಕೆಟ್​ ಇಂದೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬಿಜೆಪಿ ಹೈಕಮಾಂಡ್​ ಅಳೆದು ತೂಗಿ ಟಿಕೆಟ್​ ನೀಡುತ್ತಿದೆ.. ಅದರಲ್ಲೂ ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಬಹುತೇಕ ‌ಶಾಸಕರಿಗೆ ಟಿಕೆಟ್​ ಕೈತಪ್ಪುವ ಆತಂಕ ಎದುರಾಗಿದೆ..10ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಆಡಳಿತ ವಿರೋಧಿ‌ ಅಲೆ, ಕಾರ್ಯಕರ್ತರ ವಿರೋಧ, ವೈಯಕ್ತಿಕ ವರ್ಚಸ್ಸು ಕೆಡಿಸಿಕೊಂಡವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಟಿಕೆಟ್​ ಕೈತಪ್ಪುವ ಶಾಸಕರನ್ನ ನೋಡುವುದಾದ್ರೆ, ಸುಳ್ಯದ ಶಾಸಕ S. ಅಂಗಾರ, ಪುತ್ತೂರು ಶಾಸಕ ಸಂಜೀವ್ ಮಠಂದೂರು, ಉಡುಪಿ ಶಾಸಕ ರಘುಪತಿ ಭಟ್, ಕಾಪು‌ ಶಾಸಕ ಲಾಲಾಜಿ ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್​ ಕೈತಪ್ಪುವ ಸಾಧ್ಯತೆಯಿದೆ.. ಇನ್ನು ಕುಂದಾಪುರದಲ್ಲಿ ಈಗಾಗಲೇ ಶಾಸಕ ಹಾಲಾಡಿ ಶ್ರೀನಿವಾಸ್​ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಭಟ್ಕಳದಲ್ಲೂ ಹಾಲಿ ಶಾಸಕರ ವಿರುದ್ದ ಆಕ್ಷೇಪ ಕೇಳಿ ಬರುತ್ತಿದೆ.. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಆಡಳಿತ ವಿರೋಧಿ ಅಲೆ ಕೇಳಿಬರುತ್ತಿದೆ.. ಹೀಗೆ 10 ಶಾಸಕರಿಗೆ ಟಿಕೆಟ್​ ಕೈತಪ್ಪುವ ಸಾಧ್ಯತೆಯಿದ್ದು, ಸಂಘ ಪರಿವಾರದ ಕಾರ್ಯಕರ್ತರು, ಪಕ್ಷ ನಿಷ್ಠರು, ಯುವ ಮುಖಕ್ಕೆ ಮಣೆ ಹಾಕುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು BJP ಮೊದಲ ಪಟ್ಟಿ ಬಿಡುಗಡೆ​​​