Webdunia - Bharat's app for daily news and videos

Install App

ಪುಟ್ಟೇನಹಳ್ಳಿಯಲ್ಲಿ ಮೂಡಿ ಬಂದಿದೆ ಕೋಕೋನಟ್ ಗಣೇಶ

Webdunia
ಸೋಮವಾರ, 2 ಸೆಪ್ಟಂಬರ್ 2019 (12:38 IST)
ಬೆಂಗಳೂರು : ರಾಜ್ಯದೆಲ್ಲೆಡೆ  ಗೌರಿ ಗಣೇಶ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇದೀಗ ಪುಟ್ಟೇನಹಳ್ಳಿಯಲ್ಲಿ ಕೋಕೋನಟ್ ಗಣೇಶನನ್ನು ರಚಿಸಿ, ಪೂಜಿಸಿ ಅಲ್ಲಿನ ಜನರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ.






ಪುಟ್ಟೇನಹಳ್ಳಿಯಲ್ಲಿ ಕಳೆದ ವರ್ಷ ಇಲ್ಲಿ ಕಬ್ಬಿನ ಗಣೇಶನನ್ನು ಕೂರಿಸಲಾಗಿತ್ತು. ಆದರೆ ಈ ವರ್ಷ ವಿಶೇಷವಾದ ಸಂಪೂರ್ಣವಾಗಿ ಸಾವಿರಾರು ತೆಂಗಿನಕಾಯಿ, ಎಳನೀರು ಹಾಗೂ ಟನ್‍ಗಟ್ಟಲೆ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ ಗಣಪತಿಯನ್ನು ಮಾಡಿ, ಪೂಜಿಸಲಾಗುತ್ತಿದೆ. ಬರೋಬ್ಬರಿ 9 ಸಾವಿರ ತೆಂಗಿನ ಕಾಯಿ, 3 ಸಾವಿರ ಎಳನೀರು, 21 ವಿವಿಧ ಬಗೆಯ 15 ಟನ್‍ನಷ್ಟು ತರಕಾರಿಯನ್ನು ಬಳಸಿ ಈ ಗಣೇಶನನ್ನು ನಿರ್ಮಿಸಲಾಗಿದೆ.


ಈ ಗಣೇಶನನ್ನು ರಚಿಸಲು 75 ಜನ ಕೆಳೆದ 25 ದಿನಗಳಿಂದ ಶ್ರಮಿಸಿದ್ದಾರೆ ಎನ್ನಲಾಗಿದೆ. ಮೂರು ದಿನದ ಬಳಿಕ ಈ ಎಲ್ಲಾ ತೆಂಗಿನಕಾಯಿ, ತರಕಾರಿಯನ್ನು ಭಕ್ತರಿಗೆ ಹಂಚಲಾಗುತ್ತದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments