Select Your Language

Notifications

webdunia
webdunia
webdunia
webdunia

ಲಾಕ್ ಇಲ್ಲ, ಹುಷಾರಾಗಿರಿ: ಸಿಎಂ ಬಿಎಸ್ ವೈ

ಲಾಕ್ ಇಲ್ಲ, ಹುಷಾರಾಗಿರಿ: ಸಿಎಂ ಬಿಎಸ್ ವೈ
ಬೆಂಗಳೂರು , ಗುರುವಾರ, 18 ಮಾರ್ಚ್ 2021 (09:14 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಲಾಕ್ ಡೌನ್ ಮಾಡಲ್ಲ ಎಂದಿದ್ದಾರೆ.


ಆದರೆ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ರಾಜ್ಯದಲ್ಲಿ ಸದ್ಯದಲ್ಲಿ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಜಾರಿಗೊಳಿಸುವ ಯೋಚನೆ ಇಲ್ಲ. ಆದರೆ ಹಾಗಂತ ಬೇಕಾಬಿಟ್ಟಿ ತಿರುಗಾಡುವಂತಿಲ್ಲ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ, ಸಭಾಂಗಣಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಜನತೆ ಮನಬಂದಂತೆ ವರ್ತಿಸಿದರೆ ಕಠಿಣ ಕ್ರಮ ಅನಿವಾರ್ಯ. ಸಿನಿಮಾ, ಹೋಟೆಲ್, ಸೇರಿದಂತೆ ಎಲ್ಲೆಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು ಎಂದು ಬಿಎಸ್ ವೈ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಂದಿ ಜೀನ್ಸ್ ತೊಡುವವರ ಬಗ್ಗೆ ಉತ್ತರಾಖಂಡ ಸಿಎಂ ಆಕ್ಷೇಪ