Select Your Language

Notifications

webdunia
webdunia
webdunia
webdunia

ಸಿಎಂ ಗ್ರಾಮ ವಾಸ್ತವ್ಯ: ಕೊಳವೆ ಬಾವಿ, ಸುಣ್ಣ ಬಣ್ಣ ಭಲೇ ಜೋರು

ಸಿಎಂ ಗ್ರಾಮ ವಾಸ್ತವ್ಯ: ಕೊಳವೆ ಬಾವಿ, ಸುಣ್ಣ ಬಣ್ಣ ಭಲೇ ಜೋರು
ರಾಯಚೂರು , ಶುಕ್ರವಾರ, 21 ಜೂನ್ 2019 (17:00 IST)
ಮುಖ್ಯಮಂತ್ರಿ ಕುಮಾರಸ್ವಾಮಿ ವಾಸ್ತವ್ಯ ಹೂಡಲಿರುವ ಗ್ರಾಮಕ್ಕೆ ಕೊನೆಗೂ ಕೊಳವೆ ಬಾವಿ ಭಾಗ್ಯ ಲಭಿಸಿದ್ದು, ಊರು ಸುಣ್ಣ ಬಣ್ಣ ಕಂಡು ಸಿಂಗಾರಗೊಳ್ಳುತ್ತಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೂನ್ 26 ರಂದು ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮದ ಭೇಟಿಗೆ ಮುಂದಾಗಿದ್ದು, ಅಭಿವೃದ್ಧಿ ಮಾಡುತ್ತಿದ್ದಾರೆ.

ಕರೇಗುಡ್ಡದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸುಣ್ಣ, ಬಣ್ಣ ಕಂಡಿವೆ. ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ.

ರಸ್ತೆ ದುರಸ್ತಿ, ವಿದ್ಯುತ್ ದೀಪ ಮೊದಲಾದ ವ್ಯವಸ್ಥೆ ಕಲ್ಪಿಸುತ್ತಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

3 ವರ್ಷದ ಬಾಲಕನ ಮೇಲೆ 5 ಬೀದಿನಾಯಿಗಳು ದಾಳಿ: ಸಿಸಿಟಿವಿಯಲ್ಲಿ ಸೆರೆ