Select Your Language

Notifications

webdunia
webdunia
webdunia
webdunia

ಶಾಸಕ ಸಿಎಂ ಉದಾಸಿ ಅಂತ್ಯಕ್ರಿಯೆ ಇಂದು

ಶಾಸಕ ಸಿಎಂ ಉದಾಸಿ ಅಂತ್ಯಕ್ರಿಯೆ ಇಂದು
ಬೆಂಗಳೂರು , ಬುಧವಾರ, 9 ಜೂನ್ 2021 (08:35 IST)
ಬೆಂಗಳೂರು: ವಯೋಸಹಜ ಖಾಯಿಲೆಯಿಂದ ನಿನ್ನೆ ಇಹಲೋಕ ತ್ಯಜಿಸಿದ ಶಾಸಕ ಸಿಎಂ ಉದಾಸಿ ಅಂತ್ಯ ಕ್ರಿಯೆ ಇಂದು ನೆರವೇರಲಿದೆ.

 

85 ವರ್ಷ ವಯಸ್ಸಿನ ಉದಾಸಿ ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ತವರು ಹಾನಗಲ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.

ಬಿಜೆಪಿ ಶಾಸಕ ಉದಾಸಿ ಸಜ್ಜನ ರಾಜಕಾರಣಿಯಾಗಿದ್ದರು. ಲೋಕಪಯೋಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಕ್ರಿಯಾಶೀಲರಾಗಿದ್ದರು ಎಂದು ಸಿಎಂ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರು ಉದಾಸಿ ಅಂತಿಮ ದರ್ಶನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ ಲಾಕ್ ಬಗ್ಗೆ ಸುದ್ದಿ ಕೇಳಿಯೇ ಬೆಂಗಳೂರು ಟ್ರಾಫ್ ಜಾಮ್!