Select Your Language

Notifications

webdunia
webdunia
webdunia
webdunia

ತಿಂಗಳಲ್ಲಿ ಭೂ ಸ್ವಾಧೀನವಾಗದಿದ್ರೆ ಸಸ್ಪೆಂಡ್: ಬಿಡಿಎ ಅಧಿಕಾರಿಗೆ ಸಿಎಂ ವಾರ್ನಿಂಗ್

ಬಿಡಿಎ
ಬೆಂಗಳೂರು , ಮಂಗಳವಾರ, 14 ಜೂನ್ 2016 (14:54 IST)
ನಗರ ಪ್ರದಕ್ಷಿಣೆ ವೇಳೆ ಭೂ ಸ್ವಾಧೀನಾಧಿಕಾರಿಗೆ ತರಾಟೆಗೆ ತೆಗೆದುಕೊಂಡ ಸಿಎಂ ಒಂದು ತಿಂಗಳಲ್ಲಿ ಭೂಮಿ ಸ್ವಾಧೀನವಾಗದಿದ್ರೆ ಸಸ್ಪೆಂಡ್ ಎಂದು ಬಿಡಿಎ ಅಧಿಕಾರಿ ವಸಂತ್‌ ಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಚುರುಕು ಮುಟ್ಟಿಸಿದ್ದಾರೆ.
 
ತೆಂಗು ನಾರು ಮಂಡಳಿ ಅಧ್ಯಕ್ಷ ಕಡೂರು ನಂಜಪ್ಪನ ಸಂಬಂಧಿ ಎಂದು ಬಂದಾಗಲೆಲ್ಲಾ ಕಥೆ ಹೇಳ್ತಿಯಾ? ಮಾನ ಮರ್ಯಾದೆ ಇಲ್ವಾ ಇಂತಹ ಕೆಲಸ ಮಾಡಲಿಕ್ಕೆ ಎಂದು ಗುಡುಗಿದರು.
 
ಗಾಳಿ ಅಂಜನೇಯ ದೇವಸ್ಥಾನದ ಬಳಿಯಿರುವ ಸೇತುವೆ ಕಾಮಗಾರಿಯನ್ನು 20 ದಿನಗಳೊಳಗಾಗಿ ಮುಗಿಸುವಂತೆ ಹೇಳಿದ್ದೇನೆ, ನಾಯುಂಡಹಳ್ಳಿಯಲ್ಲಿ ಗುಂಡಿಗಳನ್ನು ಮುಚ್ಚಲು ಹೇಳಿದ್ದೆ. ಅದರಂತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದರು.
 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಯಾಗಿಸಲಾಗುವುದು. ಮುಂಜಾಗ್ರತೆಯಿಂದ ಎಲ್ಲಾ ಕಾಮಗಾರಿಗಳನ್ನು ಮುಗಿಸಿಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯ: ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ರಾಜೀನಾಮೆ