Select Your Language

Notifications

webdunia
webdunia
webdunia
webdunia

ಅನಾರೋಗ್ಯ: ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ರಾಜೀನಾಮೆ

ದೆಹಲಿ ಸಾರಿಗೆ ಸಚಿವ
ವದೆಹಲಿ , ಮಂಗಳವಾರ, 14 ಜೂನ್ 2016 (14:39 IST)
ಸಾರಿಗೆ ಸೇವಾ ಯೋಜನೆಯಲ್ಲಿ ಅ ವ್ಯವಹಾರವಾಗಿರುವುದು ಸಾಬೀತಾದಲ್ಲಿ ಜೈಲಿಗೆ ಹೋಗಲು ಸಿದ್ದ ಎಂದು ನಿನ್ನೆ ಘೋಷಿಸಿದ್ದ ಆಪ್ ಸಚಿವ ಗೋಪಾಲ್ ರೈ, ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
 
ಅನಾರೋಗ್ಯದ ಕಾರಣ ನೀಡಿ ಸಚಿವ ಸ್ಥಾನಕ್ಕೆ ಗುಡ್‌ಬೈ ಹೇಳಿದ ಗೋಪಾಲ್ ರೈಸ ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿಯವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಲೋಕೋಪಯೋಗಿ ಸಚಿವ ಮತ್ತು ಆರೋಗ್ಯ ಖಾತೆ ಸಚಿವ ಸತ್ಯೇಂದ್ರ ಜೈನ್ ಸಾರಿಗೆ ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಆಪ್ ವಕ್ತಾರರು ತಿಳಿಸಿದ್ದಾರೆ.
 
ಕಳೆದ ಏಪ್ರಿಲ್ ತಿಂಗಳಲ್ಲಿ ಎರಡನೇ ಬಾರಿಗೆ ಸಮ-ಬೆಸ ಸಾರಿಗೆ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ ದೆಹಲಿ ಸರಕಾರ ಬಸ್ ಸೇವೆಯನ್ನು ಆರಂಭಿಸಲು ನಿರ್ಧರಿಸಿತ್ತು.
 
ಆದರೆ, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬಸ್ ಸೇವೆಗೆ ಅನುಮತಿ ನೀಡಲು ನಿರಾಕರಿಸಿ, ಸಾರಿಗೆ ಸಚಿವರು ಮತ್ತೊಮ್ಮೆ ಪರಿಶೀಲಿಸುವಂತೆ ಕೋರಿದ್ದರು. ದೆಹಲಿ ಸರಕಾರ ಬಸ್ ಸೇವಾ ಯೋಜನೆಯಲ್ಲಿ ಕಾನೂನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಎಸಿಬಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕ ಮಿತ್ರಕೂಟದ ವೈಮಾನಿಕ ದಾಳಿಯಲ್ಲಿ ಐಸಿಎಸ್ ಮುಖ್ಯಸ್ಥ ಅಲ್-ಬಗ್ದಾದಿ ಹತ್ಯೆ