Webdunia - Bharat's app for daily news and videos

Install App

ನಿಯಮ ಮೀರಿ ಹತ್ತಿರದ ಸಂಬಂಧಿಗೆ ಡಿಸಿ ಹುದ್ದೆ ನೀಡಿದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ

Webdunia
ಬುಧವಾರ, 14 ಮಾರ್ಚ್ 2018 (12:20 IST)
ಬೆಂಗಳೂರು: ನಿಯಮ ಬಾಹಿರವಾಗಿ ತಮ್ಮ ಹತ್ತಿರದ ಸಂಬಂಧಿಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಿದ ಆರೋಪ ಸಿಎಂ ಸಿದ್ದರಾಮಯ್ಯ ಹೆಗಲಿಗೇರಿದೆ.

ಬಿಜೆಪಿ ಎನ್. ಆರ್ ರಮೇಶ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.  ಹಿಂದಿನ ಡಿಸಿ ಶಂಕರ್ ಕೂಡಾ ಸಿದ್ದರಾಮಯ್ಯ ಸಂಬಂಧಿ. ಇದೀಗ ಅವರ ಸ್ಥಾನಕ್ಕೆ ಬಂದಿರುವ ದಯಾನಂದ್ ಕೂಡಾ ಸಿದ್ದರಾಮಯ್ಯನವರ ಸಂಬಂಧಿ ಎಂದು ರಮೇಶ್ ಆರೋಪಿಸಿದ್ದಾರೆ.

ಬೆಂಗಳೂರು ನಗರ ಡಿಸಿ ಹುದ್ದೆ ನಿರ್ವಹಿಸಲು ಕನಿಷ್ಟ 4 ವರ್ಷಗಳ ಸೇವಾ ಹಿರಿತನವಿರಬೇಕು. ಆದರೆ ಐಎಎಸ್ ಶ್ರೇಣಿಗೆ ಬಡ್ತಿ ಪಡೆದು ಕೇವಲ 12 ದಿನಗಳಾದ ಬೆನ್ನಲ್ಲೇ ದಯಾನಂದ್ ಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಲಾಗಿದೆ. ಇದೆಲ್ಲಾ ಚುನಾವಣೆ ಸಂದರ್ಭದಲ್ಲಿ ತಮ್ಮ ಪರ ಕೆಲಸ ಮಾಡಲು ಸಿಎಂ ಮಾಡುವ ಕುತಂತ್ರ ಎಂದು ರಮೇಶ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments