Select Your Language

Notifications

webdunia
webdunia
webdunia
webdunia

ನಾಡಗೀತೆ ಹಾಡಲು ಹೋಗಿ ಎಡವಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ

ನಾಡಗೀತೆ ಹಾಡಲು ಹೋಗಿ ಎಡವಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2017 (09:14 IST)
ಬೆಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನಾಡಗೀತೆ ಹಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
 

ಭಾಷಣದ ನಡುವೆ ಸಿಎಂ ನಾಡಗೀತೆಯ ಸಾಲನ್ನು ಉಲ್ಲೇಖಿಸಿ ಐಕ್ಯತೆ ಬಗ್ಗೆ ಮಾತನಾಡಲು ಹೋಗಿ ತಪ್ಪು ತಪ್ಪಾಗಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ನಾಡಗೀತೆಯಲ್ಲಿರುವ ಸರ್ವಜನಾಂಗದ ಶಾಂತಿಯ ತೋಟ ಸಾಲಿನ್ನು ತಪ್ಪಾಗಿ ಹೇಳಿದ್ದಾರೆ.

ರಸಿಕರ ಕಣ್ಗಳ ಸೆಳೆಯುವ ನೋಟ ಎನ್ನುವ ಬದಲಾಗಿ ಸರ್ವಜನಾಂಗದ ಕಣ್ಗಳ ಸೆಳೆಯುವ ನೋಟ ಎಂದರು. ತಕ್ಷಣ ತಪ್ಪಿನ ಅರಿವಾಗಿ ತಿದ್ದಿಕೊಂಡರು. ಮತ್ತೆ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರ ಉದ್ಯಾನ ಎನ್ನುವಾಗಲೂ ಪದಗಳನ್ನು ಅದಲು ಬದಲಾಗಿ ಹೇಳಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಹಿಂದೂಯೇತರ ಬುಕ್ ನಲ್ಲಿ ಸಹಿ ಮಾಡಿರಲಿಲ್ಲ