Select Your Language

Notifications

webdunia
webdunia
webdunia
webdunia

ಮುಡಾ ಟೆನ್ಷನ್ ನಡುವೆ ಕೂಲ್ ಆಗಲು ಸಿಎಂ ಸಿದ್ದರಾಮಯ್ಯ ಟೂರ್ ಹೋಗ್ತಿರೋದು ಎಲ್ಲಿಗೆ

Siddaramaiah

Krishnaveni K

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (15:18 IST)
ಬೆಂಗಳೂರು: ಒಂದೆಡೆ ತಮ್ಮ ಮೇಲೆ ಮುಡಾ ಹಗರಣದ ತೂಗುಗತ್ತಿಯಿದ್ದರೆ ಇನ್ನೊಂದೆಡೆ ವಿಪಕ್ಷಗಳಿಂದ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಕೂಲ್ ಆಗಲು ನೆರೆ ರಾಜ್ಯಕ್ಕೆ ಪ್ರವಾಸ ಹೊರಟಿದ್ದಾರೆ.

ಮುಡಾ ಹಗರಣ ವಿಚಾರವಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೇರಳ ಪ್ರವಾಸ ಮಾಡಿದ್ದಾರೆ. ಇದಕ್ಕೆ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನಾನಿನ್ನೂ ಆದೇಶ ಪ್ರತಿ ನೋಡಿಲ್ಲ. ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

ನಿಮ್ಮ ಕುತೂಹಲ ನನಗೆ ಅರ್ಥವಾಗುತ್ತದೆ. ಆದರೆ ನನಗೆ ಆದೇಶ ಪ್ರತಿ ಇನ್ನೂ ಬಂದಿಲ್ಲ. ಇಂದು ಸಂಜೆ ಸಿಗಬಹುದು ಎಂದುಕೊಂಡಿದ್ದೇನೆ. ನಾನು ಈವತ್ತು ಕೇರಳಕ್ಕೆ ಹೋಗ್ತಾ ಇದ್ದೇನೆ. ಆದೇಶ ಪ್ರತಿ ಓದಿದ ಮೇಲೆ ನಿಮಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಲ್ಲಾ ಆರೋಪಗಳ ವಿರುದ್ಧವೂ ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಪಿತೂರಿಗಳು, ಆರೋಪಕ್ಕೆಲ್ಲಾ ನಾನು ಹೆದರೋನಲ್ಲ. ನಾನೇನೂ ತಪ್ಪು ಮಾಡಿಲ್ಲ. ಹೀಗಾಗಿ ಯಾವ ತನಿಖೆಯನ್ನೂ ಎದುರಿಸಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋರಿಪಾಳ್ಯವನ್ನು ಪಾಕ್‌ಗೆ ಹೋಲಿಸಿದ ನ್ಯಾಯಾಧೀಶ ವಿ ಶ್ರೀಶಾನಂದಗೆ ಸುಪ್ರೀಂ ತರಾಟೆ