Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟಿನ ಋಣ ತೀರಿಸಿದ್ದಾರೆ: ಬಜೆಟ್‌ಗೆ ಆರ್‌ ಅಶೋಕ್‌ ಆಕ್ರೋಶ

ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟಿನ ಋಣ ತೀರಿಸಿದ್ದಾರೆ: ಬಜೆಟ್‌ಗೆ ಆರ್‌ ಅಶೋಕ್‌ ಆಕ್ರೋಶ

Sampriya

ಬೆಂಗಳೂರು , ಶುಕ್ರವಾರ, 7 ಮಾರ್ಚ್ 2025 (15:48 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಬಜೆಟ್‌ನಲ್ಲಿ ಹೊಸತನ ಏನಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಈ ಬಜೆಟ್ ಮೂಲಕ ಋಣ ತೀರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

 ಸಿಎಂ ಸಿದ್ದರಾಮಯ್ಯರ ಮಂಡಿಸಿದ 16ನೇ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಪ ಸಂಖ್ಯಾತ ಕಾಲೋನಿಗೆ ಒಂದು ಸಾವಿರ ಕೋಟಿ ಇಟ್ಟಿದ್ದಾರೆ. ಫಾರಿನ್ ಹೋಗಲು 20 ಲಕ್ಷ ಇತ್ತು, ಈಗ 30 ಲಕ್ಷಕ್ಕೆ ಹೆಚ್ಚಿಸಿದ್ದಾರೆ.  ಗುರುದ್ವಾರ ಹೋಗಲು ಎರಡು ಕೋಟಿ, ಕ್ರಿಶ್ಚಿಯನ್ನರಿಗೆ 200 ಕೋಟಿ ಕೊಟ್ಟಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ವೋಟಿನ ಋಣ ತೀರಿಸ್ತಿದ್ದಾರೆ ತೀರಿಸಿದ್ದಾರೆ ಎಂದು ಕಿಡಿಕಾರಿದರು.

193 ಪೇಜ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಏನೂ ಹೊಸತನವಿಲ್ಲ. ಅಂತ ಅಶೋಕ್ ಕಿಡಿಕಾರಿದ್ದಾರೆ.ಕುಡಿಯಲು ನೀರು ಕೊಡು ಅಂತ ಹೇಳಿದ್ದಾರೆ. ಆದರೆ ನೀರಾವರಿ ಯೋಜನೆಗೆ ಗುಟುಕು ನೀರೂ ಇಲ್ಲ. ಬೆಂಗಳೂರಿನಲ್ಲಿ ಯಾರೂ ರಸ್ತೆ ಮೇಲೆ ಓಡಾಡಲ್ಲ, ಎಲ್ಲಾ ಸುರಂಗದಲ್ಲೇ ಓಡಾಡೋದು ಅಂತ ಅಶೋಕ್ ವ್ಯಂಗ್ಯವಾಡಿದ್ರು.

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಬಜೆಟ್‌ಗೆ ಬಿಜೆಪಿ ನಾಯಕರು ತೀವ್ರಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಆನೆ, ಕುದುರೆ ಏರಿ ಕೊಂಡು ಹೋದಿರಿ ನೀವು, ಸಿದ್ದರಾಮಯ್ಯ ಅವರು ಸಾಬ್ರು ಜಟಕಾ ಕುದುರೆ ಏರಿ ಹೊರಟಿದ್ದಾರೆ ಅಂತ ಅಶೋಕ್ ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ: ಸಿಟಿ ರವಿ ವ್ಯಂಗ್ಯ