Select Your Language

Notifications

webdunia
webdunia
webdunia
webdunia

ದಾವೂದ್ ಇಬ್ರಾಹಿಂ ಸಹೋದರನಂತೆ ಸಿಎಂ ವರ್ತನೆ: ಪ್ರಹ್ಲಾದ್ ಜೋಷಿ

ದಾವೂದ್ ಇಬ್ರಾಹಿಂ ಸಹೋದರನಂತೆ ಸಿಎಂ ವರ್ತನೆ: ಪ್ರಹ್ಲಾದ್ ಜೋಷಿ
ಹುಬ್ಬಳ್ಳಿ , ಮಂಗಳವಾರ, 5 ಸೆಪ್ಟಂಬರ್ 2017 (14:24 IST)
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡಾ ಈ ರೀತಿ ವರ್ತಿಸಿರಲಿಕ್ಕಿಲ್ಲ. ದಾವೂದ್ ಇಬ್ರಾಹಿಂ ಸಹೋದರನಂತೆ ಸಿಎಂ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂ ಓಟ್‌‍ಬ್ಯಾಂಕ್‌ಗಾಗಿ ರ್ಯಾಲಿ ತಡೆಯುವ ಯತ್ನವನ್ನು ಸರಕಾರ ಮಾಡುತ್ತಿದೆ. ನಮ್ಮ ರಾಜ್ಯವನ್ನು ಕೇರಳ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ. 
 
ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಮಂಗಳೂರಿನಲ್ಲಿ ಸಭೆ ಮಾಡಲು ಅವಕಾಶ ನೀಡಲಾಗುತ್ತಿದೆ. ಆದರೆ ,ಸರಕಾರ ನಮಗೆ  ಅನುಮತಿ ನೀಡಲು ನಿರಾಕರಿಸುತ್ತಿದೆ. ಕೊಲೆಗಡುಕರಿಗೆ ಸರಕಾರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
 
ಕಮ್ಯೂನಿಷ್ಠ ಸರಕಾರಗಳ ರೀತಿ ರಾಜ್ಯ ಸರಕಾರ ವರ್ತಿಸುತ್ತಿದೆ. ನಾವು ಶಾಂತಿಯುತವಾಗಿ ಬೈಕ್ ರ್ಯಾಲಿ ಮಾಡುತ್ತೇವೆ ಎಂದು ಮನವಿ ಮಾಡಿದರೂ ಸರಕಾರ ಪೊಲೀಸ್ ಫೋರ್ಸ್ ತಂದು ನಮ್ಮನ್ನು ತಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅನುಮತಿ ನೀಡದ ಪೊಲೀಸರು: ವಿರೋಧದ ನಡುವೆಯೂ ರ್ಯಾಲಿ ಹೊರಟ ಕಾರ್ಯಕರ್ತರು