Select Your Language

Notifications

webdunia
webdunia
webdunia
webdunia

ಬಂದ್ ಮಾಡಬೇಡಿ ಸಿಎಂ ಮನವಿ

ಬಂದ್ ಮಾಡಬೇಡಿ ಸಿಎಂ ಮನವಿ
ಬೆಂಗಳೂರು , ಬುಧವಾರ, 29 ಡಿಸೆಂಬರ್ 2021 (19:03 IST)
ಎಂಇಎಸ್​ ಪುಂಡರ ಉದ್ಧಟತನವನ್ನು ಪ್ರಶ್ನಿಸಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಕೆಲ ಕನ್ನಡ ಪರ ಸಂಘಟನೆಗಳು ಡಿಸೆಂಬರ್​ 31ರಂದು ಕರೆ ನೀಡಿರುವ ಕರ್ನಾಟಕ ಬಂದ್​ನ್ನು ಕೈ ಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
 
ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ನಾವು ಈಗಾಗಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ.
ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ, ದಯಮಾಡಿ ಬಂದ್​​ ಕರೆಯನ್ನು ಕೈ ಬಿಡಿ. ಈಗಾಗಲೇ ಕೋವಿಡ್​​ ಸಮಸ್ಯೆ ಎದುರಾಗಿದೆ . ಹೀಗಾಗಿ ಬಂದ್​ ಮಾಡಿ ಮತ್ತಷ್ಟು ಸಮಸ್ಯೆ ಮಾಡಬೇಡಿ ಎಂದು ಹೇಳಿದರು.
 
ಎಂಇಎಸ್​ ಬ್ಯಾನ್​ ಮಾಡುವ ಬಗ್ಗೆ ನಾವು ಕಾನೂನಾತ್ಮಕ ಹೋರಾಟಗಳನ್ನು ನಡೆಸುತ್ತಿದ್ದೇವೆ. ಈ ಮನವಿಯ ಬಳಿಕವೂ ಬಲವಂತದ ಬಂದ್ ಗೆ ಮುಂದಾದ್ರೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಪಾರ್ಟಿಯವರು ನನ್ನ ಮೇಲೆ ಆರೋಪ ಮಾಡುತ್ತಾರೆ