Select Your Language

Notifications

webdunia
webdunia
webdunia
webdunia

ಮಳೆಹಾನಿ ಪರಿಹಾರ ಕಾರ್ಯಾಚರಣೆಗಾಗಿ-ಸಿಎಂ ಮೀಟಿಂಗ್

CM meeting
bangalore , ಶುಕ್ರವಾರ, 8 ಜುಲೈ 2022 (20:16 IST)
ಮಳೆಹಾನಿ ಪರಿಹಾರ ಕಾರ್ಯಾಚರಣೆಗಾಗಿ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಸೇರಿ ಒಟ್ಟು 735 ಕೋಟಿ ಹಣ ಇದ್ದು ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಯಿ ಹೇಳಿದ್ರು. ಈ ವೇಳೆ ಮಳೆಯಿಂದ ಹಾನಿಗೊಳಗಾದ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವ್ರು, ಮಳೆ ಕಡಿಮೆಯಾದ ನಂತರ ನಷ್ಟದ ವರದಿ ತರಿಸಿಕೊಂಡು ಪರಿಹಾರ ವಿತರಣೆ ಮಾಡಲಾಗುತ್ತದೆ.ಕಳೆದ ಮೂರು ನಾಲ್ಕು ದಿನದಿಂದ ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತಿದೆ, ವಾಡಿಗೆಗಿಂತ ಅತಿ ಹೆಚ್ಚು ಮಳೆ ಬಿದ್ದಿದೆ, ಹೀಗಾಗಿ ಜನ-ಜಾನುವಾರಿಗೆ ತೊಂದರೆ ಆಗಿದೆ ಹಾಗಾಗಿ ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದೇನೆ. ಈಗಿರುವ ಮಾಹಿತಿ ಪ್ರಕಾರ 13 ಜಿಲ್ಲೆಗಳ ಹದಿಮೂರು ತಾಲೂಕುಗಳಲ್ಲಿ ಹಾನಿ ಜಾಸ್ತಿಯಾಗಿದೆ. ಜೂನ್ 1ರಿಂದ ಇಲ್ಲಿಯವರೆಗೂ ಕಳೆದ ಒಂದು ತಿಂಗಳ ಅವಧಿಯಲ್ಲಿ 12 ಜನ ಸಾವನ್ನಪ್ಪಿದ್ದಾರೆ, 65 ಜಾನುವಾರುಗಳ ಜೀವ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ