Select Your Language

Notifications

webdunia
webdunia
webdunia
webdunia

ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್
ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2019 (09:14 IST)
ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ವಿಡಿಯೋ ಒಂದನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ.


ಆದರೆ ಈ ವಿಡಿಯೋ ಸುಳ್ಳು, ಮತ್ತು ಬಿಜೆಪಿಯವರೇ ನನ್ನ ಇಮೇಜ್ ಹಾಳು ಮಾಡಲು ಎಡಿಟ್ ಮಾಡಿ ಹರಿಯಬಿಟ್ಟಿರುವ ವಿಡಿಯೋ ಎಂದು ಸಿಎಂ ಎಚ್ ಡಿಕೆ ಆರೋಪಿಸಿದ್ದಾರೆ.

ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಿಎಂ ಕುಮಾರಸ್ವಾಮಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುವ ವಿಡಿಯೋ ಪ್ರಕಟಿಸಿದ್ದು, ಇದರಲ್ಲಿ ಸಿಎಂ ‘ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ ಎಂದು ಯಾರು ಪರದಾಡುತ್ತಾರೋ ಅವರು ಹೋಗಿ ಬೇರೆ ದಾರಿಯಿಲ್ಲದೆ ಸೇನೆಗೆ ಸೇರುತ್ತಾರೆ. ಅಂತಹ ಯುವಕರ ಜೀವನದಲ್ಲಿ ಚೆಲ್ಲಾಟವಾಡುವ ಪ್ರಧಾನಿ ಇವರು’ ಎಂದು ಮೋದಿ ವಿರುದ್ಧ ಹರಿಹಾಯುತ್ತಾರೆ. ಈ ವಿಡಿಯೋ ಜತೆಗೆ ಬಿಜೆಪಿ ಮೊದಲು ನಿಮ್ಮ ಮಗನನ್ನು ಸೇನೆಗೆ ಸೇರಿಸಿ. ಆಗ ಸೇನೆಯವರ ಕಷ್ಟವೇನೆಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರ್ತಾರೆ ಎಂದ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್