Select Your Language

Notifications

webdunia
webdunia
webdunia
webdunia

ಜೆಡಿಎಸ್ ನಾಯಕರಿಗೆ ವಿಧಾನಸೌಧಕ್ಕೆ ಬರದಂತೆ ಸಿಎಂ ಎಚ್ ಡಿಕೆ ಎಚ್ಚರಿಕೆ!

ಜೆಡಿಎಸ್ ನಾಯಕರಿಗೆ ವಿಧಾನಸೌಧಕ್ಕೆ ಬರದಂತೆ ಸಿಎಂ ಎಚ್ ಡಿಕೆ ಎಚ್ಚರಿಕೆ!
ಬೆಂಗಳೂರು , ಗುರುವಾರ, 9 ಆಗಸ್ಟ್ 2018 (10:49 IST)
ಬೆಂಗಳೂರು: ವಿಧಾನಸೌಧಕ್ಕೆ ಬೇರೆ ಬೇರೆ ನೆಪ ಇಟ್ಟುಕೊಂಡು ಬರುವ ಜೆಡಿಎಸ್ ನಾಯಕರಿಗೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಸಭೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ ಈ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ವರ್ಗಾವಣೆ, ಇತರ ಕೆಲಸ ಮಾಡಿಸಲು ಬರುವ ನಾಯಕರಿಂದ  ಪಕ್ಷಕ್ಕೆ, ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಜೆಡಿಎಸ್ ಶಾಸಕರಿಗಿಂತ ಹೆಚ್ಚು ಇತರ ನಾಯಕರೇ ಕಾಣಿಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಬೇರೆ ಕೆಲಸ ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಯಾರೂ ಬರಬೇಡಿ ಎಂದು ಸಿಎಂ ಕುಮಾರಸ್ವಾಮಿ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ವಿರುದ್ಧ ಬಿಎಸ್ ಯಡಿಯೂರಪ್ಪ ಕಿಡಿ