Publish Date: Tue, 19 Jun 2018 (09:58 IST)
Updated Date: Tue, 19 Jun 2018 (10:00 IST)
ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದ ರತ್ನಪ್ರಭಾಗೆ ಸಿಎಂ ಕುಮಾರಸ್ವಾಮಿ ಬಂಪರ್ ಉಡುಗೊರೆ ಕೊಟ್ಟಿದ್ದಾರೆ.
ರತ್ನಪ್ರಭಾ ಸೇವಾ ಅವಧಿ ಈ ತಿಂಗಳು ಮುಕ್ತಾಯಗೊಳ್ಳಬೇಕಿತ್ತು. ಆದರೆ ಇದೀಗ ಸಿಎಂ ಕುಮಾರಸ್ವಾಮಿ ಅವರ ಸೇವಾವಧಿ ಸೆಪ್ಟೆಂಬರ್ ವರೆಗೆ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದಿದ್ದಾರೆ.
ಚುನಾವಣೆಗೆ ಮೊದಲೇ ರತ್ನಪ್ರಭಾ ಸೇವಾವಧಿ ಮುಗಿಯಬೇಕಿತ್ತು. ಆದರೆ ಅಂದಿನ ಸಿಎಂ ಸಿದ್ದರಾಮಯ್ಯ ಜೂನ್ ವರೆಗೆ ಸೇವಾವಧಿ ವಿಸ್ತರಣೆ ಮಾಡಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.