Select Your Language

Notifications

webdunia
webdunia
webdunia
webdunia

ಬಿಜೆಪಿ ಪ್ರಣಾಳಿಕೆ ವಿರುದ್ಧ ಸಿ.ಎಂ ಇಬ್ರಾಹಿಂ ಕಿಡಿ

ಬಿಜೆಪಿ ಪ್ರಣಾಳಿಕೆ ವಿರುದ್ಧ ಸಿ.ಎಂ ಇಬ್ರಾಹಿಂ ಕಿಡಿ
ಹಾವೇರಿ , ಸೋಮವಾರ, 1 ಮೇ 2023 (20:20 IST)
ಬಿಜೆಪಿ ಪ್ರಣಾಳಿಕೆಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದಾರೆ.. ಹಾವೇರಿಯಲ್ಲಿ ಮಾತನಾಡಿದ ಅವರು,
ಮೊದಲು ನಂದಿನಿ ಮುಚ್ಚದೆ, ಅಮುಲ್​ಗೆ ಮರ್ಜ್​​ ಮಾಡೋದನ್ನ ಬಂದ್ ಮಾಡಲಿ ಈ ಮುಂಡೆವು ಎಂದು ಕಿಡಿಕಾರಿದ್ದಾರೆ.. ಇವತ್ತು ಅರ್ಧ ಲೀಟರ್ ಹಾಲಲ್ಲ, ಅರ್ಧ ಲೀಟರ್ ವಿಷ ಹಂಚುತ್ತಿದ್ದಾರೆ.. ಮೂರೂವರೆ ವರ್ಷ ಏನು ಮಾಡಿದ್ರು, ರೈತರು ಬದುಕುವಂತಿಲ್ಲ ಎಂದು ಕಿಡಿಕಾರಿದ್ರು.. ಪೆಟ್ರೋಲ್ ದರ ​106 ರೂಪಾಯಿ ಆಗಿದೆ, ಹತ್ತು ಲೀಟರ್ ಪೆಟ್ರೋಲ್ ಫ್ರೀ ಕೊಡ್ತೀನಿ ಅಂತಾ ಬಿಜೆಪಿಯವರು ಹೇಳಲಿ.. ಗ್ಯಾಸ್ ರೇಟ್​​​​​​ 1,100 ಆಗಿದೆ.. ಹಳ್ಳಿಗಳಲ್ಲಿ ಕಟ್ಟಿಗೆ ಸಿಗ್ತಿಲ್ಲ.ನಾಲ್ಕು ರೊಟ್ಟಿ ಮಾಡಬೇಕಂದ್ರೆ ಇವತ್ತು ಗ್ಯಾಸ್ ಸಿಗಂಗಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.. ವಿವೇಕ ಇಲ್ಲದ ಅವೀವೇಕಿಗಳನ್ನ ತಂದು ರಾಜ್ಯದಲ್ಲಿ ಅಧಿಕಾರದಲ್ಲಿ ಕುಳಿಸಿದ್ರೆ ಈ ಪರಿಸ್ಥಿತಿ ಆಗುತ್ತೆ.. ಕಾಂಗ್ರೆಸ್​ನವರು ಟಿಕೆಟ್ ಮಾರಿಕೊಂಡಿದ್ದಾರೆ. ಬಿಜೆಪಿಯವರು ದೇಶ ಮಾರಲು ಹೊರಟಿದ್ದಾರೆ.. ನಮಗೆ ಯಾರ ಹಂಗು ಬೇಕಾಗಿಲ್ಲ. ಕಾಂಗ್ರೆಸ್​ನವರಿಗೆಅಧಿಕಾರಕ್ಕೆ ಬರ್ತಿವಿ ಎನ್ನುವ ಗ್ಯಾರಂಟಿ ಇಲ್ಲ.. ಮತ್ತೆ ಅವರ ಗ್ಯಾರಂಟಿ ಕಾರ್ಡ್​ಗೆ ಏನು ಬೆಲೆ ಬಂತು ಎಂದು ಪ್ರಶ್ನಿಸಿದ್ರು. ಮನೆಗೆ ಎರಡು ಸಾವಿರ ಅಂದಿದ್ದಾರೆ...ಅತ್ತೆಗೆ ಕೊಡ್ತಾರೊ? ಸೊಸೆಗೆ ಕೊಡ್ತಾರೋ? ಮನೆ ಮನೆಗೆ ಜಗಳ ಹಚ್ಚಲು ಕಾಂಗ್ರೆಸ್​ನವರು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ್​​ ಖರ್ಗೆ ವಿರುದ್ಧ ಜಾಧವ್ ವಾಗ್ದಾಳಿ