Publish Date: Fri, 14 Feb 2020 (09:50 IST)
Updated Date: Fri, 14 Feb 2020 (09:53 IST)
ಬೆಂಗಳೂರು : ನಿನ್ನೆ ನಡೆದ ನಗರಾಭಿವೃದ್ಧಿ ಸಭೆಯಲ್ಲಿ ಸಿಎಂ ಬಿಎಸ್ ವೈ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಯುಕ್ತರಿಗೆ ಹಲವು ಪ್ರಶ್ನೆ ಕೇಳಿದ್ದು, ರಸ್ತೆ ಗುಂಡಿಗಳನ್ನು ಇನ್ನೂ ಏಕೆ ಮುಚ್ಚಿಲ್ಲ. ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸೋವರೆಗೆ ಏನ್ ಮಾಡ್ತಿದ್ರಿ. ಕಸದ ಸಮಸ್ಯೆ ವಿಚಾರವಾಗಿ ಯಾವ ಕ್ರಮ ಕೈಗೊಂಡಿದ್ದೀರಿ. ಬೆಂಗಳೂರು ಕೆರೆ ಅಭಿವೃದ್ಧಿಗೆ ಹಣ ಕೊಟ್ರೂ ಅಭಿವೃದ್ಧಿಯಾಗ್ತಿಲ್ಲ. ಕೆರೆಗಳನ್ನು ಏಕೆ ಅಭಿವೃದ್ಧಿ ಪಡಿಸಿಲ್ಲವೆಂದು ಸಿಎಂ ಬಿಎಸ್ ವೈ ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗದುಕೊಂಡಿದ್ದಾರೆ.