Select Your Language

Notifications

webdunia
webdunia
webdunia
webdunia

ಅರ್ಧಗಂಟೆಗೆ ಮುಗಿದ ಮಳೆ ಹಾನಿ ಪ್ರದೇಶ ಭೇಟಿ: ಸಿಎಂ ಬೊಮ್ಮಾಯಿ ಕಾಟಾಚಾರ ವೀಕ್ಷಣೆ!

ಅರ್ಧಗಂಟೆಗೆ ಮುಗಿದ ಮಳೆ ಹಾನಿ ಪ್ರದೇಶ ಭೇಟಿ: ಸಿಎಂ ಬೊಮ್ಮಾಯಿ ಕಾಟಾಚಾರ ವೀಕ್ಷಣೆ!
bengaluru , ಬುಧವಾರ, 18 ಮೇ 2022 (14:37 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರು ಬುಧವಾರ ಬೆಳಿಗ್ಗೆ ಬೆಂಗಳೂರಿನ ಮಳೆ ಪೀಡಿತ ಪ್ರದೇಶಗಳಿಗೆ ಕಾಟಾಚಾರದ ಭೇಟಿ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಭಾರೀ ಮಳೆ ಸುರಿದು ಹಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿತ್ತು ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಆರ್.‌ ಅಶೋಕ್‌ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.
ಬುಧವಾರ ಬೆಳಿಗ್ಗೆ ಸಿಎಂ ಹಾಗೂ ಬಿಜೆಪಿ ನಾಯಕರು ಕೇವಲ ಮೂರು ಮನೆ ಮತ್ತು ೨ ರಸ್ತೆಗೆ ಭೇಟಿ ನೀಡಿ ಕಾಟಾಚಾರಕ್ಕೆ ಮಳೆ ಪ್ರದೇಶಕ್ಕೆ ಭೇಟಿ ನೀಡಿ ಮರಳಿದ್ದಾರೆ. ಇದರಿಂದ ಸ್ಥಳೀಯರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರುತ್ತಿದ್ದಂತೆ ನಾಯಕರು ವಾಪಸ್ಸಾಗಿದ್ದು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮಳೆಗೆ 2 ಸಾವು, 300 ದೂರು, 2000 ಮನೆ ಮುಳುಗಡೆ