Select Your Language

Notifications

webdunia
webdunia
webdunia
webdunia

ಧರ್ಮಸಾಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಫೋಟ

explode
ಬಳ್ಳಾರಿ: , ಭಾನುವಾರ, 8 ಮೇ 2016 (11:31 IST)
ಬಳ್ಳಾರಿ ಹೊಸಪೇಟೆಯ ತಾಲೂಕಿನ ಧರ್ಮಸಾಗರದಲ್ಲಿ ಮೂರು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ  ಶುದ್ಧ ಕುಡಿಯುವ ನೀರಿನ ಘಟಕ ಸ್ಫೋಟಗೊಂಡಿದ್ದು, ಈಗ ನೀರಿನ ಟ್ಯಾಂಕ್, ಯಂತ್ರ ಪೀಸ್, ಪೀಸ್ ಆಗಿದ್ದು ಬಾಗಿಲುಗಳು ಹಾರಿಹೋಗಿವೆ.

ಇದರಿಂದ ಎಷ್ಟರಮಟ್ಟಿಗೆ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿರಬಹುದು ಎಂಬ ಶಂಕೆ ಉದ್ಭವಿಸಿದೆ. ಹನಿನೀರಿಗಾಗಿ ಜನರು ಪರದಾಡುವಂತ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಗಿತ್ತು. ಇದರಿಂದ ಜನರು ಸಂತಸ ವ್ಯಕ್ತಪಡಿಸಿದ್ದರು. ಈ ಭಾಗದ ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದರಿಂದ ಜನರು ಶುದ್ಧಕುಡಿಯುವ ನೀರು ಪೂರೈಕೆಯಾಗುತ್ತದೆಂದು ಸಂತಸಪಟ್ಟಿದ್ದರು.

ಜನತೆಗೆ ಕುಡಿಯುವ ನೀರು ಪೂರೈಕೆಯಾಗುವ ಮುಂಚೆಯೇ ಈ ಸ್ಫೋಟ ಸಂಭವಿಸಿದೆ. ಅಧಿಕಾರಿಗಳ ವಿರುದ್ಧ ಧರ್ಮಸಾಗರ ಗ್ರಾಮಸ್ಥರ ಆಕ್ರೋಶಗೊಂಡಿದ್ದು, ಕಳಪೆ ಕಾಮಗಾರಿಯಿಂದ ಈ ಘಟನೆ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

 


Share this Story:

Follow Webdunia kannada

ಮುಂದಿನ ಸುದ್ದಿ

ಮಗನನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆಗೆ ಶರಣು