Webdunia - Bharat's app for daily news and videos

Install App

Chinnaswamy stampede: ಬಿ ದಯಾನಂದ್ ಮೆಸೇಜ್ ಮಾಡಿದ್ರು: ಶಾಕಿಂಗ್ ಸತ್ಯ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ

Krishnaveni K
ಸೋಮವಾರ, 9 ಜೂನ್ 2025 (12:57 IST)
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಬಿ ದಯಾನಂದ್ ಅವರನ್ನು ಅಮಾನತು ಮಾಡಿರುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಾಕಿಂಗ್ ಸತ್ಯ ರಿವೀಲ್ ಮಾಡಿದ್ದಾರೆ.

ಕಮಿಷನರ್ ದಯಾನಂದ್ ಅಮಾನಾತದ ಮೇಲೆ ಅವರ ಎಂಥಾ ದಕ್ಷ ಅಧಿಕಾರಿಯಾಗಿದ್ದರು ಎಂಬ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ. ಪ್ರಾಮಾಣಿಕ ಅಧಿಕಾರಿಯಾಗಿದ್ದ ಬಿ ದಯಾನಂದ್ ಅವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವೂ ಕೇಳಿಬರುತ್ತಿದೆ. ಈ ನಡುವೆ ಪ್ರಲ್ಹಾದ್ ಜೋಶಿ ಹೊಸ ವಿಚಾರವೊಂದನ್ನು ಹೇಳಿದ್ದಾರೆ.

‘ನನಗೆ ಗೊತ್ತಿರುವ ಹಾಗೆ ಪ್ರತೀ ದಿನ ಬೆಳಿಗ್ಗೆ 7.30 ಕ್ಕೆ ನಗರ ಕಮಿಷನರ್ ಸಿಎಂ ಮತ್ತು ಡಿಸಿಎಂಗೆ ಆವತ್ತಿನ ಬ್ರೀಫಿಂಗ್ ಕೊಡಬೇಕು. ಆದರೆ ನಮ್ಮ ದೌರ್ಭಾಗ್ಯ ನೋಡಿ, ಆರ್ ಸಿಬಿ ಕಪ್ ಗೆದ್ದಿದೆ ಎಂದು ರಾತ್ರಿಯೆಲ್ಲಾ ಕುಡಿದು ಕುಣಿದು ಕುಪ್ಪಳಿಸಿದ್ದರಿಂದ ಅವರಿಗೆ ಭದ್ರತೆ ನೀಡಿ ಪೊಲೀಸರು ಸುಸ್ತಾಗಿದ್ರು. ಹೀಗಾಗಿ ಬೆಳಿಗ್ಗೆ ಮೀಟಿಂಗ್ ಗೆ ಬರಕ್ಕಾಗಲ್ಲ ಎಂದು ಬಿ ದಯಾನಂದ್ ಹೋಂ ಮಿನಿಸ್ಟ್ರಿಗೆ ಮೆಸೇಜ್ ಮಾಡಿದ್ರು. ಮುಂದೆ 8.30 ಕ್ಕೆ ಡಿಸಿಪಿ ಎಲ್ಲಾ ಅರೇಂಜ್ ಮಾಡಿದ್ದಾರೆ ಎಂದು. ಆಗ ಅವರು ಸಿಎಂಗೆ ಅರೇಂಜ್ ಮೆಂಟ್ ಮಾಡಬೇಡಿ ಎಂದು ಮಾಹಿತಿ ನೀಡಿದ್ದಾರೆ. ಈಗ ಇದಕ್ಕೆ ಯಾರು ಜವಾಬ್ಧಾರರು?

ಅಲ್ಲಾ ಕುಂಭಮೇಳಕ್ಕೆ ಇದನ್ನು ಹೋಗಿ ಹೋಲಿಸ್ತೀರಲ್ಲಾ? ಇಲ್ಲಿ ನಡೆದಿದ್ದು ನಿಮ್ಮ ಮೂರ್ಖತನದಿಂದ. ಅದಕ್ಕೂ ಇದಕ್ಕೂ ಎಲ್ಲಿಯ ಹೋಲಿಕೆ?’ ಎಂದಿದ್ದಾರೆ. ಇನ್ನು ಸರ್ಕಾರಕ್ಕೆ ಮುಜುಗರ ಆಗಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ದಪ್ಪ ಚರ್ಮದವರಿಗೆ ನಾಚಿಕೆಯೇ ಆಗಲ್ಲ. ಸೂಕ್ಷ್ಮ ಸಂವೇದಿಗಳಿಗೆ ಮಾತ್ರ ಅಗುತ್ತದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

ಮುಂದಿನ ಸುದ್ದಿ
Show comments