Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಪುಂಡರ ಹಾವಳಿ ...!!!

ರಾಜಧಾನಿಯಲ್ಲಿ ಪುಂಡರ ಹಾವಳಿ ...!!!
ಬೆಂಗಳೂರು , ಸೋಮವಾರ, 25 ಅಕ್ಟೋಬರ್ 2021 (19:09 IST)
ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.
 
ನಗರದ ಬಿ.ನಾರಾಯಣಪುರದಲ್ಲಿ ದುರ್ಘಟನೆ ನಡೆದಿದೆ. ಇದು ಎರಡು ದಿನದ ಹಿಂದೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.ಬಾಲಕರು ಶಾಲಾ ಮೈದಾನಕ್ಕೆ ಆಟವಾಡಲು ಹೋದಾಗ ಈ ಘಟನೆ ನಡೆದಿದೆ. ಅವರನ್ನು ಸುತ್ತುವರಿದ ಯುವಕರ ಗುಂಪು ಒಂದು ತಾಸಿಗೂ ಹೆಚ್ಚು ಸಮಯ ಹಿಂಸೆ ನೀಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಒತ್ತಾಯಿಸಿದ್ದಾರೆ. ಮಕ್ಕಳು ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದ ಪುಂಡರು ವಿಕೃತಿ ಮೆರೆದಿದ್ದು ಇದೆಲ್ಲವನ್ನೂ ವಿಡಿಯೋ ಸಹ ಮಾಡಿದ್ದಾರೆ.
 
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೃತ್ಯದ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದು ನಂತರ ಮಹದೇವಪುರ ಪೊಲೀಸರಿಗೆ ದೂರು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರೊನಾಗೆ ಗುಡ್ ಬೈ..!!!