Select Your Language

Notifications

webdunia
webdunia
webdunia
webdunia

ರೈತನಿಂದ ಪಡೆದಿದ್ದ ಲಂಚದ ಹಣವನ್ನ ಅಧಿಕಾರಿಯಿಂದ ಕಕ್ಕಿಸಿದ ರೈತರು..!

ರೈತನಿಂದ ಪಡೆದಿದ್ದ ಲಂಚದ ಹಣವನ್ನ ಅಧಿಕಾರಿಯಿಂದ ಕಕ್ಕಿಸಿದ ರೈತರು..!
ಬೆಳಗಾವಿ , ಶುಕ್ರವಾರ, 7 ಜುಲೈ 2017 (16:48 IST)
ರೈತನಿಂದ ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಯಿಂದ ರೈತರು ಲಂಚದ ಹಣ ಕಕ್ಕಿಸಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.

ಮಳೆ ಇಲ್ಲದೆ, ಬೆಳೆ ಇಲ್ಲದೆ ರೈತರ ಸಂಕಷ್ಟದಲ್ಲಿದ್ದರೆ ಹೆಸ್ಕಾ ಸೆಕ್ಷನ್ ಆಫೀಸರ್ ರಾಜು ಗಬ್ಬೂರು ಎಂಬಾತ ಟ್ರಾನ್ಸ್`ಫಾರ್ಮರ್ ಬದಲಾವಣೆಗೆ ರೈತನೊಬ್ಬನಿಂದ 6000 ರೂ. ಲಂಚ ಪಡೆದಿದ್ದ. ಅಧಿಕಾರಿಯ ಲಂಚಾವತಾರ ಕಂಡು ರೋಸಿಹೋಗಿದ್ದ ರೈತರು ಲಂಚಾವತಾರ ವಿಡಿಯೋ ಮಾಡಿದ್ದರು.

ಇದೀಗ, ಪೊಲೀಸರ ಸಮ್ಮುಖದಲ್ಲಿ ವಿಡಿಯೋ ಬಹಿರಂಗಪಡಿಸಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ಲಂಚ ಪಡೆದ ಬಗ್ಗೆ ತಪ್ಪೊಪ್ಪಿಕೊಂಡ ಅಧಿಕಾರಿ. ಲಂಚದ ಹಣವನ್ನ ವಾಪಸ್ ರೈತನಿಗೆ ನೀಡಿದ್ದಾನೆ. ಇನ್ಮುಂದೆ ಲಂಚ ಪಡೆಯುವವರ ವಿರುದ್ಧ ಮುಗಿಬೀಳಲು ನಿರ್ಧರಿಸುವ ರೈತರು ಲಂಚ ಕೇಳುವ ಅಧಿಕಾರಿಗಳಿಗೆ ಬದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿ ರಕ್ಷಣೆ: ಆಕೆಯನ್ನೇ ವಿವಾಹವಾಗಲು ನಿರ್ಧರಿಸಿದ ಯುವಕ