Webdunia - Bharat's app for daily news and videos

Install App

ಎಲ್ಲಾ ಅಧಿಕಾರಿಗಳ ಮೊಬೈಲ್ ಕಾಲರ್ ಟ್ಯೂನ್ ಬದಲಾಯಿಸಿದ ಸಚಿವ

Webdunia
ಭಾನುವಾರ, 21 ಜೂನ್ 2020 (20:11 IST)
ರಾಜ್ಯ ಸರಕಾರದ ಈ ಇಲಾಖೆಯ ಅಧಿಕಾರಿಗಳ ಮೊಬೈಲ್ ಕಾಲರ್ ಟ್ಯೂನ್ ನನ್ನು ಸಚಿವರೊಬ್ಬರು ಬದಲಾವಣೆ ಮಾಡಿದ್ದಾರೆ.

ರೈತರನ್ನು ಎಲ್ಲರೂ ನೆನೆಯುವ ಉದ್ದೇಶದಿಂದ ಕೃಷಿ ಇಲಾಖೆಯ ಎಲ್ಲ ಮೊಬೈಲ್ ಫೋನ್ ಗಳಿಗೆ ಒಳಬರುವ ಕಾಲರ್ ಟ್ಯೂನ್ ಅನ್ನು "ನಮಸ್ಕಾರ ಅನ್ನದಾತನಿಗೊಂದು ನಮನ, ಜೈ ಕಿಸಾನ್" ಎಂಬ ಹಾಡನ್ನು ಹಾಕಿ ಕುವೆಂಪು ಅವರು ಬರೆದ ನೇಗಿಲಯೋಗಿ ಹಾಡನ್ನು  ಅದಕ್ಕೆ ಸೇರಿಸಲು ಸುತ್ತೋಲೆ ಕಳುಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

ಜಗತ್ತಿನಲ್ಲಿ ಎಲ್ಲ ಉದ್ಯಮಗಳು ಮುಚ್ಚಿಕೊಂಡು ಹೋದ ಸಂದರ್ಭದಲ್ಲಿ ಕೃಷಿ ಮಾತ್ರ ಉಳಿದುಕೊಂಡಿದೆ. ಕೃಷಿಕ ಕೋವಿಡ್, ಲಾಕ್ ಡೌನ್ ಸಮಯದಲ್ಲೂ ತನ್ನ ಯಾವುದೇ ಕೆಲಸಗಳನ್ನು ಬಿಡದೆ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವುದರಿಂದ ಜಗತ್ತಿಗೆ ಅನ್ನ ಸಿಗುತ್ತಿದೆ ಎಂದರು.

ಚಂದ್ರಗ್ರಹಣ, ಸೂರ್ಯ ಗ್ರಹಣ ಇವು ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆಗಳು. ಅದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments