Webdunia - Bharat's app for daily news and videos

Install App

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಛಲವಾದಿ ನಾರಾಯಣ ಸ್ವಾಮಿ

Webdunia
ಸೋಮವಾರ, 17 ಜುಲೈ 2023 (17:24 IST)
ಇಂದು ಬೆಂಗಳೂರಿನಲ್ಲಿ ರಾಷ್ಟ್ರದ ಎಲ್ಲಾ ವಿಪಕ್ಷಗಳ ಮಹಾಘಟಬಂಧನ್ ಸಭೆ ಸೇರುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದು,ಈ ಮಹಾ ಘಟಬಂಧನ್ ಯಾವ ಕಾರಣಕ್ಕೆ ಅನ್ನೋದು ಅವರಿಗೆ ಗೊತ್ತಿಲ್ಲ.ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನ ಸೋಲಿಸಲು ಸೇರಿದ್ದಾರೆ.
 
ನಾನು ಬೆಂಗಳೂರಿನಲ್ಲಿ ನೋಡಿದೆ.ಯುನೈಟೆಡ್ ವಿ ಸ್ಟಾಂಡ್ ಅಂತ ಬರ್ಕೊಂಡ್ ಫೋಟೋ ಹಾಕ್ಕೊಂಡಿದ್ದೇವೆ.ಯುನೈಟೆಡ್ ವಿಬಸ್ಟಾಂಡ್ ಅಂದ್ರೇನು.ಒಂದಾಗೋಕೆ ಇವರ ನೀತಿ, ಸಿದ್ದಾಂತ ಒಂದೇ ಇದೆಯೇ.?ಹಾಗಿದ್ರೆ ಯಾವ ಸ್ಟ್ಯಾಂಡ್ ಮೇಲೆ ನಿಲ್ತಾರೆ.?ಈ ದೇಶವನ್ನು ಒಗ್ಗಟ್ಟಾಗಿ ನಡೆಸೋಕೆ ಯಾರ ವಿರೋಧ ಇಲ್ಲ.ಮೊದಲನೇದಾಗಿ ಮುಫ್ತಿ ಮೊಹಮದ್ ಮತ್ತಿತರರು ಬಂದಿದ್ದಾರೆ.ಅವರ ಸ್ಟ್ಯಾಂಡ್ ಪಾಕಿಸ್ತಾನಕ್ಕೆ ಸೇರಬೇಕು ಅನ್ನೋದು.ಮಮತಾ ಬ್ಯಾನರ್ಜಿಯವರು ಬಾಂಗ್ಲಾ ಜೊತೆ ಸೇರೋದು.ಇವರು ಬಂದಿರೋ ಎಲ್ಲರೂ ಕುತಂತ್ರ ಮಾಡೋಕೆ ಬಂದಿದ್ದಾರೆ.ಒಬ್ಬರಿಗೊಬ್ಬರಲ್ಲಿ ವಿಶ್ವಾಸ ಇಲ್ಲದವರು ಇವರು.ಮಳೆಗಾಲದಲ್ಲಿ ಹಣಬೆ ರೀತಿ ಬೆಳೆದಿದ್ದಾರೆ.ಸ್ವಲ್ಪ ದಿನ ಕಳೆದ ಬಳಿಕ ಅವರೇ ಚದುರಿಹೋಗ್ತಾರೆ.ಬೆಂಗಳೂರು ವೆದರ್ ಚೆನ್ನಾಗಿದೆ ಅಂತ ಟೂರ್ ಬಂದಿದ್ದಾರೆ.65 ವರ್ಷ ಈ ದೇಶ ಆಳಿದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ‌
 
ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದ್ದಾರೆ.ಇಂದು ಅವರು ಸಂಸದರೂ ಕೂಡ ಅಲ್ಲ.ಈ ದೇಶವನ್ನ ಹರಾಜಿಗೆ ಇಡಲು ಪ್ರಯತ್ನ ಪಡ್ತಿದ್ದೀರಿ‌.ನೀವು ಚೌಚೌ ಗಿರಾಕಿಗಳು.ಬಂದಿರೋದು ಅತಿಥಿಗಳು ಅಂತ ಬಾವಿಸಿದ್ದಾರೆ.ಬಂದಿರೋರನ್ನ ಕರ್ನಾಟಕ ಸರ್ಕಾರ ನೋಡಿಕೊಳ್ತಿದೆ.ಅವರ ಖರ್ಚು ವೆಚ್ಚ ಯಾರು ನೋಡಿಕೊಳ್ತಿದ್ದಾರೆ.??ನಮ್ಮ ತೆರಿಗೆ ಹಣದಲ್ಲಿ ಖರ್ಚು ಮಾಡಿದ್ರೆ ನಾವು ವಿರೋಧ ಮಾಡ್ತೀವಿ.ಇದು ಖಾಸಗಿ ಕಾರ್ಯಕ್ರಮ.ಖಾಸಗಿಯಾಗೆ ಹಣ ಖರ್ಚು ಮಾಡಲಿ.ಇಲ್ಲದಿದ್ರೆ ಸಿಎಂಗೆ ಎಚ್ಚರಿಕೆ ಕೊಡ್ತೀವಿ, ಪರಿಣಾಮ ಎದುರಿಸ್ತೀರಿ.
 
ಈಗ ಮಳೆ ಕೊರತೆ ಎದುರಾಗಿದೆ.ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗಿದೆ.ಇದೆಲ್ಲವನ್ನೂ ಸದನದಲ್ಲಿ ಗಮನ ಸೆಳೆಯುವ ಕೆಲಸ ಮಾಡ್ತೀವಿ.ಸಿದ್ದರಾಮಯ್ಯ ಅವರ ಸರ್ಕಾರ ಜನರ ಎಲ್ಲರ ಆಶೋತ್ತರಗಳಿಗೆ ಕಲ್ಲು ಹಾಕಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments