Select Your Language

Notifications

webdunia
webdunia
webdunia
webdunia

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ - ದೆಹಲಿಗೆ

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ - ದೆಹಲಿಗೆ
bangalore , ಭಾನುವಾರ, 11 ಡಿಸೆಂಬರ್ 2022 (20:31 IST)
ವಿಧಾನಪರಿಷತ್ ಸಭಾಪತಿ ಚುನಾವಣೆಗೆ ಭಾರೀ ಟ್ವಿಸ್ಟ್  ಪಡೆದುಕೊಂಡಿದ್ದು, ಹಂಗಾಮಿ‌ ಸಭಾಪತಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ   ತರಾತುರಿಯಲ್ಲಿ ದೆಹಲಿಗೆ  ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ತೆರಳಿದ್ದಾರೆ. ದೆಹಲಿಗೆ ಬರುವಂತೆ ಕೇಂದ್ರ ನಾಯಕರ ಸೂಚನೆ ನೀಡಲಾಗಿದ್ದು, ಇಂದು ರಾತ್ರಿಯೇ ದೆಹಲಿಯಲ್ಲಿ ವರಿಷ್ಠ ನಾಯಕರ ಜೊತೆಗೆ ಮಲ್ಕಾಪುರೆ ಚರ್ಚೆ ನಡೆಸಲಿದ್ದಾರೆ. ಡಿಸೆಂಬರ್ 21 ಕ್ಕೆ  ಸರ್ಕಾರ ಸಭಾಪತಿ ಚುನಾವಣೆ ನಿಗದಿ ಮಾಡಿದ್ದು, ಬಿಜೆಪಿ ನಾಯಕರ ಸೂಚನೆ ಮೇರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಭಾಪತಿ ಮಲ್ಕಾಪುರೆ ಬದಲಾವಣೆಗೆ ಕುರುಬ ನಾಯಕರ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು,  ದೆಹಲಿ ತಲುಪಿದ ಕುರುಬ ಮತ್ತು ಮೂಲ ಬಿಜೆಪಿ ನಾಯಕರ ಬೇಸರ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾನಗರದ ಕ್ಯಾಸಿನೋ ಮೇಲೆ ಸಿಸಿಬಿ ಪೊಲೀಸರ ದಾಳಿ