ರಾಜಧಾನಿಯಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ: ಗಣತಿದಾರರಿಗೆ ಎರಡು ವಾರಗಳ ಗಡುವು

Sampriya
ಶನಿವಾರ, 4 ಅಕ್ಟೋಬರ್ 2025 (10:13 IST)
Photo Credit X
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‌ಇಂದಿನಿಂದ ಜಾತಿಗಣತಿ ಸಮೀಕ್ಷೆ ಆರಂಭ ಆಗಲಿದೆ. ಸುಮಾರು 32 ಲಕ್ಷ ಮನೆಗಳ ಸಮೀಕ್ಷೆ ಆಗಲಿದ್ದು, ಗಣತಿದಾರರಿಗೆ ಎರಡು ವಾರಗಳ ಗಡುವು ನೀಡಲಾಗಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಇಂದಿನಿಂದ ಸಮೀಕ್ಷೆ ಆರಂಭ ಆಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭ ಆಗಿರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 7ಕ್ಕೆ ಸಮೀಕ್ಷೆ ಮುಕ್ತಾಯ ಆಗಲಿದೆ ಎಂದು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ವಿವರಿಸಿದ್ದಾರೆ. 

ಒಟ್ಟು 32 ಲಕ್ಷ ಮನೆಗಳ ಸಮೀಕ್ಷೆ ಆಗಬೇಕಿದ್ದು, ಸಮೀಕ್ಷೆಗೆ 17 ಸಾವಿರ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 100ರಿಂದ 150 ಮನೆ ಒಬ್ಬೊಬ್ಬರಿಗೆ ನೀಡಲಿದ್ದಾರೆ. ಸಮೀಕ್ಷೆ ಸಿಬ್ಬಂದಿ ಕಡಿಮೆ ಇರುವ ಸಮೀಕ್ಷೆ ಮುಕ್ತಾಯಕ್ಕೆ ಮೂರರಿಂದ ನಾಲ್ಕು ತಿಂಗಳಾದರೂ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಿದೆ.  

ರಾಜ್ಯದಲ್ಲಿ ಶೇ 64ರಷ್ಟು ಸಮೀಕ್ಷೆ ಮುಕ್ತಾಯ ಆಗಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಸಮೀಕ್ಷೆ ಇಂದಿನಿಂದ ಆರಂಭ ಆಗುತ್ತಿದೆ. ಹಾಗಾಗಿ ಒಟ್ಟು ರಾಜ್ಯದ ಸಮೀಕ್ಷೆ ಯಾವಾಗ ಮುಕ್ತಾಯ ಆಗಲಿದೆ ಎಂದು ಕಾದು ನೋಡಬೇಕಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಮರ ಮುನಿಸು ತಣಿಸಲು ಹಿಜಾಬ್ ಮುಲಾಮು ಹಚ್ಚಿದ ಕಾಂಗ್ರೆಸ್: ಆರ್ ಅಶೋಕ್ ಆರೋಪ

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ: ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದೂಗಳು

Karnataka Weather: ಈ ಜಿಲ್ಲೆಗಳ ಹವಾಮಾನ ಬದಲಾವಣೆ ಇಂದು ತಪ್ಪದೇ ಗಮನಿಸಿ

ನಾಳೆ ಗೊತ್ತಾಗಲಿದೆ ಕೇರಳ ಸಿಎಂ ಪಟ್ಟ ಯಾರಿಗೆಂದು

NEET-UG 2026 ಪೇಪರ್ ಲೀಕ್ ಪ್ರಕರಣ: 5 ಮಂದಿ ಅರೆಸ್ಟ್‌, ಅನೇಕ ಸ್ಥಳಗಳ ಮೇಲೆ ದಾಳಿ

ಮುಂದಿನ ಸುದ್ದಿ
Show comments