Webdunia - Bharat's app for daily news and videos

Install App

ಸಿಡಿ ಪ್ರಕರಣ ಸಿಬಿಐನಿಂದ ತನಿಖೆ ಮಾಡಿಸಲಿ-ರವಿಕುಮಾರ್

Webdunia
ಬುಧವಾರ, 1 ನವೆಂಬರ್ 2023 (16:00 IST)
ರಾಜ್ಯಕ್ಕೆ ಎಐಸಿಸಿ ನಾಯಕರ ಆಗಮನ ಹಿನ್ನೆಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಕ್ರಿಯಿಸಿದ್ದು,ದೆಹಲಿಯಿಂದ ಕಾಂಗ್ರೆಸ್ಸಿನ ನಾಯಕರು ಬಂದಿದ್ದಾರೆ.ಈ ಇಬ್ಬರು ಬಂದ ಕೂಡಲೇ ಜನರು ಏನು ಮಾತಾಡ್ತಿದ್ದಾರೆ ಅಂದರೆ ಕಾಂಗ್ರೆಸ್ ಗೆ ಗುರಿ ನಿಶ್ಚಯ ಮಾಡಲು ಬಂದಿದ್ದಾರೆ.ಪಂಚ ರಾಜ್ಯಕ್ಕೆ ಹಣ ಸರಬರಾಜು ಮಾಡಿಸಲು ಬಂದಿದ್ದಾರೆ ಅಂತಾ ಐಟಿ ರೇಡ್ ನಿಂದ ಸಿಕ್ಕಿರುವ ಹಣ ಯಾರದ್ದು ಎಂದು ಈ ಇಬ್ಬರು ಬಹಿರಂಗ ಪಡಿಸಬೇಕು.ಇವ್ರು ಕನ್ನಡ ನಾಡಿನ ರಕ್ಷಣೆ ಬಗ್ಗೆ ಮಾತಾಡ್ತಾರಂತೆ.ಕನ್ನಡದ ಸಂಪತ್ತು, ನೆಲ ಜಲ ಭಾಷೆ ರಕ್ಷಣೆ ಮಾಡೋರಲ್ಲ ಇವರು.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ.ಸುಪ್ರೀಂಕೋರ್ಟ್ ನಲ್ಲಿ ಇವರಿಂದ ಸರಿಯಾದ ವಾದ ಮಾಡಿಲ್ಲ.

ತಮಿಳುನಾಡಿಗೆ ಇವ್ರು ಬರೀ ಸೋಲುವುದೇ ಕೆಲಸ.ಮೇಕೆದಾಟು ಯೋಜನೆ ಬಗ್ಗೆ ಇವ್ರು ಯಾರು ಮಾತಾಡ್ತಿಲ್ಲ.ಕೆ ಸಿ ವೇಣುಗೋಪಾಲ್, ಸುರ್ಜೇವಾಲ ಬಂದಿದ್ದಾರೆ.ಸೀನಿಯರ್ ಶಾಸಕರುಗಳಿಗೆ ಅಧ್ಯಕ್ಷ ಮಾಡಲು ಬಂದಿದ್ದಾರೆ.ನಿಗಮ ಮಂಡಲಿಗೂ ಇಷ್ಟು ಹಣ ಎಂದು ಗುರಿ ನಿಶ್ಚಯ ಮಾಡಲು ಬಂದಿದ್ದಾರೆ.ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ, ಗುದ್ದಾಟ ಮುಗಿಲು ಮುಟ್ಟಿದೆ.ಸರ್ಕಾರದ ಪತನ ಕುರಿತ ರಮೇಶ್ ಜಾರಕಿಹೊಳಿ ಮಾತು ಸತ್ಯವಾಗಿದೆ ಎಂದು ರವಿಕುಮಾರ್ ಹೇಳಿದ್ದಾರೆ.
 
ಇವರು ಇಬ್ಬರು ಬಂದಿರೋದು ಅತ್ಯಂತ ನಾಚಿಕೆಗೇಡಿನ ಸಂಗತಿ.ಇವ್ರು ಮತ್ತೆ ಕರ್ನಾಟಕದಲ್ಲಿ ಹಣ ಲೂಟಿ ಮಾಡಲು ಬಂದಿದ್ದಾರೆ.ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಪ್ರಕರಣ ವನ್ನು ಸಿಬಿಐಗೆ ವಹಿಸಬೇಕು.ಇದರ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ಹೇಳಿದ್ದಾರೆ.ಅದಕ್ಕಾಗಿ ಪ್ರಕರಣವನ್ನು ಸಿಬಿಐ ನಿಂದ ತನಿಖೆ ಮಾಡಿಸಲಿ.ಕನ್ನಡಕ್ಕೆ ಪ್ರತ್ಯೇಕ ಧ್ವಜಕ್ಕೆ ಅನುಮತಿ ವಿಚಾರ ಇದರ ಬಗ್ಗೆ ಅವ್ರು ಚರ್ಚಗೆ ಕರೆಯಲಿ, ಅದರ ಬಗ್ಗೆ ನಾವು ಮಾತಾಡ್ತೀವಿ.ಕೇಂದ್ರದ ನಿಯಮಾವಳಿಗಳ ಪ್ರಕಾರ ಚರ್ಚೆ ಆಗಲಿ ಎಂದು ರವಿಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಳ್ಳಾರಿ ಪಾದಯಾತ್ರೆ ಬಗ್ಗೆ ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ

ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ, ಆದರೆ ತಪ್ಪು ಹರಡಲಾಗುತ್ತಿದೆ, ನನಗೆ ಹಜ್ ಗೆ ಹೋಗಬೇಕೆಂದಿದೆ: ಬಸವರಾಜ ರಾಯರೆಡ್ಡಿ

ಆನ್‌ಲೈನ್‌ನಲ್ಲಿ ಮಗಳ ಮದುವೆ ನೋಡಿ ಕಣ್ಣೀರಿಟ್ಟ ಹೆತ್ತವರು: Video

ಕರ್ನಾಟಕ ಉದ್ಯಾನವನ ತಿದ್ದುಪಡಿ ಕಾಯ್ದೆ ವಿರುದ್ಧ ಲಾಲ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ

ನಂಜೊತೆ ಬನ್ನಿ ಎಂದು ಮಹಿಳೆಯನ್ನು ಕರೆದೊಯ್ದ ಬೀದಿ ನಾಯಿ: ಕೊನೆಗೆ ತೋರಿಸಿದ್ದು ಏನು, ನಿಜಕ್ಕೂ ಅಚ್ಚರಿ Video

ಮುಂದಿನ ಸುದ್ದಿ
Show comments