Publish Date: Mon, 10 Jun 2019 (19:15 IST)
Updated Date: Mon, 10 Jun 2019 (19:17 IST)
ಹಾಡ ಹಗಲಲ್ಲೇ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಅಪಹರಿಸಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಈ ಘಟನೆ ನಡೆದಿದೆ. ಹರಿಪ್ರಸಾದ್ ಎಂಬುವರು 1 ಲಕ್ಷ ನಗದನ್ನು ಕಾರಿನಲ್ಲಿಟ್ಟು ಕಳೆದುಕೊಂಡವರು.
ಬ್ಯಾಂಕಿನಲ್ಲಿ ಠೇವಣಿ ಮಾಡಲು ಹಣ ತಂದಿದ್ದ ಹರಿಪ್ರಸಾದ್ ಮಾರ್ಗದ ನಡುವೆ ಮಿನಿವಿಧಾನಸೌಧ ದಲ್ಲಿ ವಯಕ್ತಿಕ ಕೆಲಸಕ್ಕಾಗಿ ಬಂದಿದ್ದರು.
ಆವರಣದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು. ಹೊಂಚು ಹಾಕಿದ್ದ ಖದೀಮರು ಕಾರಿನೊಳಗಿದ್ದ ಹಣದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.