Select Your Language

Notifications

webdunia
webdunia
webdunia
webdunia

ಕಾರು ಡಿಕ್ಕಿ, ಯುವಕ ಸಾವು

ಕಾರು ಡಿಕ್ಕಿ
ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಮಾಗಡಿ ನಿವಾಸಿ ಯಶ್ವಂತ್ KSRTC ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಬಸ್‌ ಟಯರ್ ಪಂಚರ್ ಆಗಿದೆ. ಆ ವೇಳೆ ಡ್ರೈವರ್ ಮತ್ತು ಕಂಡಕ್ಟರ್ ಟೈಯರ್ ಬದಲಿಸಲು ಕೆಳಗಿಳಿದಿದ್ದಾರೆ. ಬೆಳಗಿನ ನಸುಕಿವ ಜಾವವಿದ್ದ ಕಾರಣ ಯಶ್ವಂತ್ ಟಯರ್ ಬದಲಾಯಿಸಲು ಟರ್ಚ್ ಹಾಕಿಕೊಂಡು ನಿಂತು ಸಹಾಯ ಮಾಡ್ತಿದ್ದ, ಈ ವೇಳೆ ವೇಗವಾಗಿ ಬಂದ ಕಾರೊಂದು ಯಶ್ವಂತ್‌ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಯಶ್ವಂತ್ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್​ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು?