Select Your Language

Notifications

webdunia
webdunia
webdunia
webdunia

ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಿದರೆ ನಿಭಾಯಿಸುವೆ: ಶಂಕರಮೂರ್ತಿ

ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಿದರೆ ನಿಭಾಯಿಸುವೆ: ಶಂಕರಮೂರ್ತಿ
ಹಾಸನ , ಭಾನುವಾರ, 25 ಡಿಸೆಂಬರ್ 2016 (17:58 IST)
ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಿದರೆ ನಿಭಾಯಿಸುವೆ. ಇಲ್ಲದಿದ್ದರೆ ಯಾವುದೇ ನಿರಾಸೆ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಿದರೆ ನಿಭಾಯಿಸುವೆ. ಈ ಹಿಂದೆ ಕನ್ನಡಗರಿಗೆ ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಬಾರದೆಂದು ಜಯಲಲಿತಾ ಆಗ್ರಹಿಸಿದ್ದರು. ಆದರೆ, ಅವರು ಇಗಿಲ್ಲ. ಈ ಕುರಿತು ಹೆಚ್ಚು ಹೇಳಲಾರೆ ಎಂದರು. 
 
ರಾಜ್ಯಪಾಲ ಹುದ್ದೆ ಸಿಗದಿದ್ದರೆ ಯಾವುದೇ ಬೇಸರ ಇಲ್ಲ. ಈಗಾಗಲೇ ಪಕ್ಷ ನನಗೆ ಅನೇಕ ಹುದ್ದೆಗಳನ್ನು ನೀಡಿದೆ ಎಂದು ತಿಳಿಸಿದರು.
 
ಮೋದಿ ನಿರ್ಧಾರ ಸ್ವಾಗತಿಸಿದ ಡಿ.ಎಚ್.ಶಂಕರಮೂರ್ತಿ........
 
ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಯಲ್ಲಿ ಅಟ್ಟಾಡಿಸಿ ಕೊಂದರು