Select Your Language

Notifications

webdunia
webdunia
webdunia
webdunia

ಖಚಿತತೆ ಇಲ್ಲದೆ ಗೌರಿ ಹಂತಕರ ಬಗ್ಗೆ ಏನೋ ಹೇಳಲಾಗದು: ರಾಮಲಿಂಗಾರೆಡ್ಡಿ

ಖಚಿತತೆ ಇಲ್ಲದೆ ಗೌರಿ ಹಂತಕರ ಬಗ್ಗೆ ಏನೋ ಹೇಳಲಾಗದು: ರಾಮಲಿಂಗಾರೆಡ್ಡಿ
ಬೆಂಗಳೂರು , ಶುಕ್ರವಾರ, 6 ಅಕ್ಟೋಬರ್ 2017 (10:36 IST)
ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ತಿಂಗಳು ಕಳೆದ ಬೆನ್ನಲ್ಲೇ ಕೆಲವು ಸುದ್ದಿ ವಾಹಿನಿಗಳಲ್ಲಿ ಹಂತಕರು ಕೆಲವು ಸಂಘಟನೆಗೆ ಸೇರಿದವರು ಎಂದು ವರದಿಯಾಗಿತ್ತು. ಈ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

 
ಗೌರಿ ಲಂಕೇಶ್ ಹಂತಕರ ಬಗ್ಗೆ ಸುಳಿವು ಸಿಕ್ಕಿರುವುದು ನಿಜ. ಆದರೆ ಎಸ್ಐಟಿ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ. ಕೆಲವು ಸಂಘಟನೆಯ ಮೇಲೆ ಅನುಮಾನವಿರುವುದು ನಿಜ ಎಂದು ಸಚಿವರು ಹೇಳಿದ್ದಾರೆ.

ಆದರೆ ಖಚಿತತೆ ಇಲ್ಲದೆ ಹಂತಕರು ಯಾರು, ಯಾವ ಸಂಘಟನೆಗೆ ಸೇರಿದವರು ಎಂದು ಹೇಳಲಾಗದು ಎಂದು ಸುದ್ದಿಗಾರರಿಗೆ ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ. ಈಗ ಹಂತಕರ ಬಗ್ಗೆ ಸುಳಿವು ಕೊಟ್ಟರೆ ತನಿಖೆಗೆ ತೊಂದರೆಯಾಗುತ್ತದೆ. ಹಾಗಾಗಿ ಏನೂ ಹೇಳಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಖಾರಿಪುರ ಬಿಟ್ಟು ಎಲ್ಲೂ ಹೋಗಲ್ಲ : ಬಿಎಸ್ ಯಡಿಯೂರಪ್ಪ