Select Your Language

Notifications

webdunia
webdunia
webdunia
webdunia

ಸರ್ವಪಕ್ಷಗಳ ಸಭೆ ಕರೆಯಲು ಬೊಮ್ಮಾಯಿ ಆಗ್ರಹ

ಸರ್ವಪಕ್ಷ
ಬೆಂಗಳೂರು , ಬುಧವಾರ, 27 ಜುಲೈ 2016 (18:38 IST)
ಮಹದಾಯಿ ನ್ಯಾಯಾಧಿಕರಣ ತೀರ್ಪಿನಿಂದ ಕರ್ನಾಟಕಕ್ಕೆ ರಾಜ್ಯಕ್ಕೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 
ನ್ಯಾಯಾಧಿಕರಣದ ತೀರ್ಪಿನಿಂದ ನೀರು ಬಳಕೆ ಮಾಡಿಕೊಳ್ಳಲು ಅಡ್ಡಿಯಾಗಿದೆ. ಟ್ರಿಬ್ಯುನಲ್ ನ್ಯಾಯಾಧಿಕರಣ ರಾಜ್ಯದ ಬೇಡಿಕೆಯನ್ನು ಪರಿಗಣಿಸಿದೆ. ಆದರೆ, ಮಧ್ಯಂತರ ತೀರ್ಪು ನೀಡಲು ಇದು ಸೂಕ್ತ ಸಮಯವಲ್ಲ ಎಂದು ತಿರಸ್ಕರಿಸಿದೆ ಎಂದು ಸ್ಪಷ್ಟಪಡಿಸಿದರು.
 
ಅಂತರಾಜ್ಯ ನದಿ ವಿವಾದ ಕಾನೂನು ಗೊತ್ತಿಲ್ಲದವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಲಿ ಎಂದು ಒತ್ತಾಯಿಸುತ್ತಿದ್ದಾರೆ. ಗೋವಾ ಸರಕಾರ ಮಾತುಕತೆಗೆ ಒಪ್ಪದಿರುವುದರಿಂದ ಮೋದಿ ಮಧ್ಯ ಪ್ರದೇಶ ಅಸಾಧ್ಯ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನೌಕರರ ಮುಷ್ಕರ ವಾಪಸ್: ಸಂಜೆಯಿಂದ ಬಸ್ ಸಂಚಾರ ಆರಂಭ