ಸಾರಿಗೆ ನೌಕರರ ವೇತನವನ್ನು ಶೇ 12.5ರಷ್ಟು ಹೆಚ್ಚಳ ಮಾಡಲು ರಾಜ್ಯ ಸರಕಾರ ಸಮ್ಮತ್ತಿ ಸೂಚಿಸಿರುವ ಹಿನ್ನೆಲೆಯಲ್ಲಿ ಕಳೆದು ಮೂರು ದಿನಗಳಿಂದ ನಡೆಯುತ್ತಿದ್ದ ಮುಷ್ಕರವನ್ನು ಸಾರಿಗೆ ನೌಕರರ ಸಂಘ ವಾಪಸ್ ಪಡೆದುಕೊಂಡಿದೆ.
ಸಾರಿಗೆ ನೌಕರರ ವೇತನವನ್ನು 30 ಪ್ರತಿಶತ ಹೆಚ್ಚಳಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಬಸ್ ಬಂದ್ಗೆ ಕರೆ ನೀಡಿದ್ದರು.
ಸಾರಿಗೆ ನೌಕರರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರಿಗೆ ಸಚಿವರಿಗೆ ಹೊಣೆಗಾರಿಕೆಯನ್ನು ನೀಡಿದ್ದರು. ಇಂದು ಸರಕಾರ ನೌಕರರ ಸಂಘದೊಂದಿಗೆ ಸಭೆ ನಡೆಸಿ, ಸಾರಿಗೆ ನೌಕರರ ವೇತನವನ್ನು 12.5 ಪ್ರತಿಶತ ಹೆಚ್ಚಳ ಮಾಡವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.
ಸರಕಾರ ಹಾಗೂ ನೌಕರರ ಸಂಘದ ಸಂಧಾನ ಸಭೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಲಿದೆ ಎಂದು ಮೂಲಗಳ ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ