Select Your Language

Notifications

webdunia
webdunia
webdunia
webdunia

ಸಂಪುಟ ಉಪಸಮಿತಿ ನಡೆಗೆ ಸಚಿವ ಅಸಮಧಾನ!

ಸಂಪುಟ ಉಪಸಮಿತಿ ನಡೆಗೆ ಸಚಿವ ಅಸಮಧಾನ!
ಚಿಕ್ಕಬಳ್ಳಾಪುರ , ಶುಕ್ರವಾರ, 11 ಜನವರಿ 2019 (18:35 IST)
ಸಚಿವ ಸಂಪುಟ ಉಪ ಸಮಿತಿಯ ನಡೆಗೆ ಸಚಿವರೊಬ್ಬರು ಅಸಮಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಬೆಳೆಗಳ ಪರಿಶೀಲನೆಯನ್ನು ಕೃಷಿ ಸಚಿವರ ಅಧ್ಯಕ್ಷತೆಯ ಬರ ಪರಿಶೀಲನಾ ಸಮಿತಿ ನಡೆಸಿತು.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ನೇತೃತ್ವದ ತಂಡದ ಸದಸ್ಯರು, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಂಭೀರನಹಳ್ಳಿಗೆ ಭೇಟಿ ನೀಡಿದರು. ಅಲ್ಲಿ ನಷ್ಟಕ್ಕೀಡಾಗಿರುವ ತೊಗರಿ ಹಾಗೂ ಅವರೆ ಬೆಳೆ ಪರಿಶೀಲನೆ ನಡೆಸಿದರು.

ಆಗ ಸಚಿವರನ್ನು ಬಿಸಿಲಲ್ಲೆ ನಿಲ್ಲಿಸಿ ರೈತರಿಂದ ಸಮಸ್ಯೆಗಳ ಅನಾವರಣ ನಡೆಯಿತು. ಸಾಕು ನಡೆಯಿರಿ ಎಂದ್ರೂ  ರೈತರು ಕೇಳಲಿಲ್ಲ. ರೈತರ ಸಮಸ್ಯೆಗಳನ್ನು ಆಲಿಸಲು ಸಚಿವರು ತಾಳ್ಮೆ ವಹಿಸಲಿಲ್ಲ ಎಂದು ರೈತರು ದೂರಿದರು. ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂದು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ರೈತರು.



Share this Story:

Follow Webdunia kannada

ಮುಂದಿನ ಸುದ್ದಿ

ಗಡಿನಾಡಿಗೆ ಕ್ರಿಕೆಟರ್ಸ್ ಭೇಟಿ