Webdunia - Bharat's app for daily news and videos

Install App

ಮಗ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಸಿ.ಎಂ.ಲಿಂಗಪ್ಪ

Webdunia
ಬುಧವಾರ, 7 ನವೆಂಬರ್ 2018 (14:57 IST)
ರಾಮನಗರ : ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮತ್ತೆ ಪುನಃ ಕಾಂಗ್ರೆಸ್ ಗೆ ಸೇರ್ಪಡೆಯಾದ ತಮ್ಮ ಮಗ ಚಂದ್ರಶೇಖರ್ ವಿರುದ್ಧ ಸಿ.ಎಂ.ಲಿಂಗಪ್ಪ ಕಿಡಿಕಾರಿದ್ದಾರೆ.


ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಚಂದ್ರಶೇಖರ್ ಮೊದಲು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇ ದೊಡ್ಡ ತಪ್ಪು, ಅಂಥದ್ದರಲ್ಲಿ ಬಿ ಫಾರಂ ತೆಗೆದುಕೊಂಡು, ಚುನಾವಣೆಗೆ ನಿಂತು ಶಾಸಕನಾಗುತ್ತೀನಿ ಅಂದುಕೊಳ್ಳುವಷ್ಟರಲ್ಲಿ ಹಿಂದೆ ಸರಿಯುವುದು ಸುಲಭವಲ್ಲ ಎಂದು ಹೇಳಿದ್ದಾರೆ.


ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಗೊತ್ತಿಲ್ಲ. ನನ್ನ ಮಗನ ಜೊತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ. ಇದು ಕ್ಷಮಿಸುವಂತಹ ಅಪರಾಧ ಅಲ್ಲ ನಾನು ಇಷ್ಟು ವರ್ಷದಿಂದ ಕಟ್ಟಿಕೊಂಡಿದ್ದ ರಾಜಕೀಯ ಸೌಧ ಉರುಳಿಹೋಗಿದೆ. ನನ್ನ ಮಗನಿಗೆ ಯೋಗೇಶ್ವರ್ ಹಾಗೂ ರುದ್ರೇಶ್ ಹತ್ತಾರು ಮಾತುಗಳನ್ನು ಹೇಳಿರಬಹುದು ಆದರೆ ಅವನ ಬುದ್ದಿ ಎಲ್ಲಿ ಹೋಗಿತ್ತು ಎಂದು ಸಿ.ಎಂ.ಲಿಂಗಪ್ಪ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments