Webdunia - Bharat's app for daily news and videos

Install App

ತೊಗರಿ ಕಾಳು ಖರೀದಿ: 14ರವರೆಗೆ ನೋಂದಣಿಗೆ ಅವಕಾಶ

Webdunia
ಗುರುವಾರ, 3 ಜನವರಿ 2019 (18:31 IST)
ಬಿಸಿಲೂರು ಖ್ಯಾತಿ ಜಿಲ್ಲೆಯ ಎಲ್ಲ ರೈತರಿಂದ 2018-19 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಕಾಳು ಖರೀದಿಸಲು  ಜನವರಿ 7 ರವರೆಗೆ ನಿಗದಿಪಡಿಸಲಾದ ನೋಂದಣಿ ಕಾರ್ಯವನ್ನು ಸರ್ಕಾರದ ಆದೇಶದನ್ವಯ ನೋಂದಣಿ ಕಾರ್ಯವನ್ನು ಜನವರಿ 14 ರವರೆಗೆ ಮುಂದುವರೆಸಿ ನಿಗದಿಪಡಿಸಲಾಗಿದೆ.

ಕಲಬುರಗಿ ರೈತರು ನೊಂದಣಿಗಾಗಿ ನೀಡಬೇಕಾದ ವಿವರ ಸಿಆಸು (ಇ-ಆಡಳಿತ) ಇಲಾಖೆಯು ಸಿದ್ದಪಡಿಸಿರುವ ತಂತ್ರಾಂಶದೊಂದಿಗೆ ಭೂಮಿ, ಆಧಾರ ಕೇಂದ್ರ  ಮತ್ತು ಬೆಳೆ ದರ್ಶಕ ದತ್ತಾಂಶದಲ್ಲಿ ತಾಳೆ ಮಾಡಿ ಪರಿಶೀಲಿಸಿದ ನಂತರವೇ ರೈತರ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ದತ್ತಾಂಶದಲ್ಲಿ ತೊಗರಿ ಉತ್ಪನ್ನ ಬೆಳೆಯದೇ ಇರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಪರಿಶೀಲಿಸಿ ದೃಢಿಕರಿಸಿದ್ದಲ್ಲಿ ಅಂತಹ ರೈತರನ್ನು ನೊಂದಾಯಿಸಲಾಗುತ್ತದೆ.

ತೊಗರಿ ಬೆಳೆದ ರೈತರು ಪಹಣಿ ಪತ್ರಿಕೆ ಮತ್ತು ಆಧಾರ ದಾಖಲೆಗಳಲ್ಲಿ ಒಂದೇ ತರಹದ ಹೆಸರು ಇರಬೇಕಾಗುತ್ತದೆ ಹಾಗೂ ಆಧಾರ ಜೋಡಣೆಯಾದ ಬ್ಯಾಂಕ ಖಾತೆ ಹೊಂದಿರಬೇಕು. ಎಲ್ಲಾ ರೈತರು ಇದಕ್ಕೆ ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments