Webdunia - Bharat's app for daily news and videos

Install App

ಮಲ್ಯ ಆಸ್ಪತ್ರೆಯಿಂದ ವಿಷ್ಣು ಎಸ್ಕೇಪ್… ಹುಡುಕಾಟಕ್ಕೆ ವಿಶೇಷ ತಂಡ ರಚನೆ

Webdunia
ಶುಕ್ರವಾರ, 29 ಸೆಪ್ಟಂಬರ್ 2017 (19:34 IST)
ಬೆಂಗಳೂರು: ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಮಲ್ಯ ಆಸ್ಪತ್ರೆಯಿಂದ  ಎಸ್ಕೇಪ್ ಆಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯಚರಣೆ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ಹೇಳಿದ್ದಾರೆ.
ವಿಷ್ಣು ಚಲಾಯಿಸುತ್ತಿದ್ದ ಕಾರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷ್ಣು ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಹುಡುಕಾಟಕ್ಕಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ವಿಷ್ಣು ಪರಾರಿಯಾಗಲು ಸಹಾಯ ಮಾಡಿದವ್ರ ಮೇಲೆ ಕ್ರಮತೆಗೆದುಕೊಳ್ಳಲಾಗುವುದು ಎಂದರು.

ಇವತ್ತು ಬೆಳಗ್ಗೆ ವಿಷ್ಣು ಪರಾರಿಯಾಗಿರುವುದು ಗೊತ್ತಾಗಿದೆ. ವಿಷ್ಣು ಬೆಡ್ ನಲ್ಲಿ ಇರಲಿಲ್ಲ. ಟಾಯ್ಲೆಟ್ ನಲ್ಲಿರಬಹುದು ಅಂದು ಕೊಂಡಿದ್ವಿ. ಆದರೆ ವಿಷ್ಣು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೂ ಪೇಷೆಂಟ್ ಕಾಣೆಯಾಗಿರುವ ಬಗ್ಗೆ ಹೇಳಿದ್ದೀವಿ ಎಂದು ಆಸ್ಪತ್ರೆ ವೈದ್ಯ ಮಲ್ಲಿಕಾರ್ಜುನ್ ಹೇಳಿದ್ದಾರೆ.

ವಿಷ್ಣು ಎಸ್ಕೇಪ್ ಆದ ಸ್ಥಳ

ಪೇಷೆಂಟ್ ಪರಾರಿಯಾಗಲು ಸಿಬ್ಬಂದಿ ಯಾರೂ ಸಹಾಯ ಮಾಡಿಲ್ಲ. ಆಸ್ಪತ್ರೆ ಕರ್ತವ್ಯ ಚಿಕಿತ್ಸೆ ನೀಡುವುದು. ವಿಷ್ಣು ನಿರ್ದೇಶಕಿ ತೇಜಸ್ವಿನಿ ಸಂಬಂಧಿ ಎಂದು ಗೊತ್ತು. ಆದರೆ ಮಗ ಅಂತ ಗೊತ್ತಿರಲಿಲ್ಲ. ತಪ್ಪಿಸಿಕೊಳ್ಳುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೆ ವೈದ್ಯ ಮಲ್ಲಿಕಾರ್ಜುನ ನುಣುಚಿಕೊಂಡಿದ್ದಾರೆ.

ತನಿಖೆ ಸಹಕಾರ ನೀಡದೆ, ಆರೋಪಿ ರಕ್ಷಣೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸೆ. 27ರಂದು ವಿಷ್ಣು ಚಲಾಯಿಸುತ್ತಿದ್ದ ಬೆಂಝ್ ಕಾರು, ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಅಲ್ಲದೆ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಕೂಡ ಪತ್ತೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments